For the best experience, open
https://m.samyuktakarnataka.in
on your mobile browser.

ಮದುವೆಯಾಗಿಲ್ಲವೆಂದು ಯುವಕ ನೇಣಿಗೆ ಶರಣು

07:28 PM Dec 15, 2024 IST | Samyukta Karnataka
ಮದುವೆಯಾಗಿಲ್ಲವೆಂದು ಯುವಕ ನೇಣಿಗೆ ಶರಣು

ಆನಂದಪುರ: ಸಮೀಪದ ಕೈರಾ ಗ್ರಾಮದ ಯುವಕ ಮದುವೆಯಾಗಿಲ್ಲವೆಂದು ಮನನೊಂದು ನೇಣಿಗೆ ಶರಣಾದ ಘಟನೆ ಶನಿವಾರ ನಡೆದಿದೆ.
ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈರಾ ಗ್ರಾಮದ ಸಂದೀಪ(೩೩) ಎಂಬಾತ ಮದುವೆಯಾಗಿಲ್ಲವೆಂದು ಮನನೊಂದು ತೋಟದ ಶೆಡ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.