For the best experience, open
https://m.samyuktakarnataka.in
on your mobile browser.

ಅಂಜುವ ಕುಲವಲ್ಲ, ಆಂಜನೇಯನ ಕುಲ…

01:19 PM Sep 19, 2024 IST | Samyukta Karnataka
ಅಂಜುವ ಕುಲವಲ್ಲ  ಆಂಜನೇಯನ ಕುಲ…

ಬೆಂಗಳೂರು: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದ ಮೇರೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸಿದ್ದರಾಮಯ್ಯನವರ ಸರ್ಕಾರ ನನ್ನ ಮೇಲೆ ಪ್ರಕರಣ ಧಾಖಲಿಸಿ ನನ್ನನು ಭಯಪಡಿಸಬಹುದು ಎಂದು ಅಂದುಕೊಂಡರೆ ಅವರ ಮೂರ್ಖತನ. ಈವರೆಗೂ ಕಾಂಗ್ರೆಸ್ ಸರ್ಕಾರ ನನ್ನ ವಿರುದ್ಧ ಧಾಖಲಿಸಿದ ಬಹುತೇಕ ಪ್ರಕರಣಗಳಲ್ಲಿ ಸರ್ಕಾರ ಸೋಲು ಒಪ್ಪಿಕೊಂಡು ಹೈಕೋರ್ಟ್ ಆದೇಶಕ್ಕೆ ಮಂಡಿಯೂರಿದೆ ಎಂದಿದ್ದಾರೆ.

Tags :