ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅಂತೂಬಂತು ಕಪ್ಪು ಬಿಆರ್‌ಸಿ ಕಪ್ಪು…

02:30 AM May 25, 2024 IST | Samyukta Karnataka

ಐಪಿಎಲ್‌ನಲ್ಲಿ ಈರಾಟೇಸ್ವರನ ಗ್ಯಾಂಗು ಯಾಕೆ ಹೀಗೆ ಮಾಡಿತು? ಈ ಬಾರಿ ನಮಗೆ ಕಪ್ಪೇ ಇಲ್ಲವೇ… ಎಂದು ಮನಸ್ಸಿಗೆ ಹಚ್ಚಿಕೊಂಡಿರುವ ತಳವಾರ್ಕಂಟಿ ಈಗ ಭಯಂಕರ ಮಂಕಾಗಿದ್ದಾನೆ. ಮೊದಲೆರಡು ದಿನ ಏನೋ ಆಗಿರಬಹುದು ಎಂದು ಮನೆಯಲ್ಲಿ ಸುಮ್ಮನಾದರು. ದಿನಾಲೂ ಊಟವನ್ನೂ ಸರಿಯಾಗಿ ಮಾಡದೇ ಮೂಲೆಯಲ್ಲಿ ಕುಳಿತುಕೊಂಡು… ಕಪ್ಪು… ಕಪ್ಪು… ಕಪ್ಪು ಎಂದು ಬಡಬಡಿಸುತ್ತಿದ್ದ. ಯಾಕಪ್ಪ ಹೀಗೆ ಎಂದರೆ ಕಣ್ಣು ಪಿಳಿಪಿಳಿ ಬಿಟ್ಟು ನೋಡುತ್ತಿದ್ದ. ಕೊನೆಗೆ ಆಡಿನಲಚುಮವ್ವ ಬೆಲ್ಲದ ಚಹ ಮಾಡಿಕೊಂಡು ಬಂದು ಕುಡಿಸಿ ಯಾಕಪ್ಪಾ ಅಂತ ಕೇಳಿದಾಗ… ಆರ್‌ಸಿಬಿ ಬದಲು ಬಿಆರ್‌ಸಿ ಎಂದು ಉಲ್ಟಾಪಲ್ಟಾ ಹೇಳಿದ್ದ. ಮರುದಿನದಿಂದ ಊರಲ್ಲಿ ಕಂಟಿಗೆ ಬಿಆರ್‌ಸಿ ಆಗಿದೆ ಎಂದು ಮಾತನಾಡಿಕೊಂಡರು. ಏನಿದು ಬಿಆರ್‌ಸಿ ಅಂದರೆ ಅದು ಬಂದವರಿಗೆ ಮಾತ್ರ ಗೊತ್ತು ಎಂಬ ಉತ್ತರ ಬರುತ್ತಿತ್ತು. ಅದ್ಭುತ ಸೈಕಿಯಾಟ್ರಿಸ್ಟ್ ಸಾಬೇಸಿ ಕಡೆಗೆ ಹೋಗಿ ನೋಡಿ ನಮ್ಮುಡುಗ ಅಂದರೆ ಓ… ಎಂದು ರಾಗ ಎಳೆದು.. ಇದು ಅದೇ.. ಇದು ಅದೇ ಎಂದು ಎರಡು ಬಾರಿ ಅಂದು ಎದುರಿಗೆ ಕಂಟಿಯನ್ನು ಕೂಡಿಸಿಕೊಂಡು…. ಹುಬ್ಬು ಹಾರಿಸಿದ. ಕಂಟಿಯೂ ಹಾಗೆ ಮಾಡಿದ. ಮುಗುಳ್ನಕ್ಕ ಸೈಕೋ ಸಾಬೇಸಿ…. ಆಹಾ ಅಂದ, ಕಂಟಿಯೂ ಆಹಾ ಅಂದ. ನಂತರ ಜೋರಾಗಿ ಇರಾಟಾ…. ಎಂದು ಕೂಗಿದ. ಕಂಟಿಯೂ ಸಹ ಮಾಳಿಗೆ ಹಾರಿ ಹೋಗುವ ಹಾಗೆ ಇರಾಟಾ… ಎಂದು ಕೂಗಿದ. ಓ… ದಾರಿಗೆ ಬರುತ್ತಿದ್ದಾನೆ ಎಂದು ಅಂದು…. ಕಪ್ಪು… ಕಪ್ಪೇ ಅಂದ… ಅವನೂ ಸಹ ಕಪ್ಪು ಕಪ್ಪೇ…. ಅಂದ. ನನಗೆ ಬೇಕು ಕಪ್ಪು-ಈಗಲೇ ಕೊಡು ಪಪ್ಪು ಎಂದು ಸೈಸಾ ಅಂದ. ಅದಕ್ಕೆ ಕಂಟಿಯೂ ಹಾಗೆಯೇ ಅಂದ. ಕೂಡಲೇ ತನ್ನ ಕಂಪೌಂಡರ್‌ಗೆ ಸನ್ನೆ ಮಾಡಿದ. ಆತ ಹೋಗಿ ದೊಡ್ಡ ಎರಡು ಕಪ್ಪು ತೆಗೆದುಕೊಂಡು ಅದರ ಮೇಲೆ ಬಿಆರ್‌ಸಿ ಕಪ್ಪು ಎಂದು ಬರೆದು..ಇಬ್ಬರಿಗೂ ಒಂದೊಂದು ಕೊಟ್ಟ. ಆಗ ಸೈಸಾ… ನನಗೆ ಸಿಕ್ಕಿತು ಕಪ್ಪು…ಇದು ಬಿಆರ್‌ಸಿ ಕಪ್ಪು ಅಂತ ರಾಗಬದ್ದವಾಗಿ ಹಾಡಿದ. ಕಂಟಿಯೂ ಹಾಗೆ ಹಾಡಿದ… ಯುರೇಕಾ ಎಂದು ಒದರಿದ ಸೈಕಿಯಾಟ್ರಿಸ್ಟ್ ಸಾಬೇಸಿ… ಅರಾಮ್ ಆದ ಕರೆದುಕೊಂಡು ಹೋಗಿ ಎಂದು ಹೇಳಿ ಅವರ ಕಡೆಯಿಂದ ಫೀಸು ಇಸಿದುಕೊಂಡ.

Next Article