For the best experience, open
https://m.samyuktakarnataka.in
on your mobile browser.

ಅಗ್ನಿ ಅವಘಡ ಕಣಕಿ ಮೇವಿನ ಬಣವಿ ಭಸ್ಮ

02:27 PM Mar 06, 2024 IST | Samyukta Karnataka
ಅಗ್ನಿ ಅವಘಡ ಕಣಕಿ ಮೇವಿನ ಬಣವಿ ಭಸ್ಮ

ವಾಡಿ: ಅಗ್ನಿ ಅವಘಡ ಸಂಭವಿಸಿ ಕಣಕಿ ಮೇವಿನ ಬಣವಿ ಸುಟ್ಟು ಭಸ್ಮವಾದ ಘಟನೆ ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವಲಯದ ತರ್ಕಸಪೇಟೆ ಗ್ರಾಮದಲ್ಲಿ ಸಂಭವಿಸಿದೆ. ಯಂಕಣ್ಣ ಗಡ್ಡಿಮನಿ ಎನ್ನುವ ರೈತನಿಗೆ ಸೇರಿದ ಜಮೀನಿನಲ್ಲಿ ಈ ದುರಂತ ಸಂಭವಿಸಿದೆ. ಬೇಸಿಗೆಯಲ್ಲಿ

ಎತ್ತುಗಳಿಗೆ ತಿನ್ನಿಸಲು ಅಂದಾಜು 70ಸಾವಿರ ರೂ. ಮೌಲ್ಯದ ಜೋಳದ ಕಣಕಿ ಮೇವು ಖರೀದಿಸಿ ಹೊಲದಲ್ಲಿ ಬಣವಿ ಒಟ್ಟಲಾಗಿತ್ತು. ಸೋಮವಾರ ರಾತ್ರಿ ಈ ಮೇವು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಕಿ ಹೇಗೆ ಹತ್ತಿಕೊಂಡಿತು ಎಂಬುದು ಗೊತ್ತಾಗಿಲ್ಲ. ವಾಡಿ ಪೊಲೀಸ್ ಠಾಣೆಗೆ ರೈತ ಯಂಕಣ್ಣ ದೂರು ನೀಡಿದ್ದಾರೆ.