ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅಗ್ನಿ ಅವಘಡ ಕಣಕಿ ಮೇವಿನ ಬಣವಿ ಭಸ್ಮ

02:27 PM Mar 06, 2024 IST | Samyukta Karnataka

ವಾಡಿ: ಅಗ್ನಿ ಅವಘಡ ಸಂಭವಿಸಿ ಕಣಕಿ ಮೇವಿನ ಬಣವಿ ಸುಟ್ಟು ಭಸ್ಮವಾದ ಘಟನೆ ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವಲಯದ ತರ್ಕಸಪೇಟೆ ಗ್ರಾಮದಲ್ಲಿ ಸಂಭವಿಸಿದೆ. ಯಂಕಣ್ಣ ಗಡ್ಡಿಮನಿ ಎನ್ನುವ ರೈತನಿಗೆ ಸೇರಿದ ಜಮೀನಿನಲ್ಲಿ ಈ ದುರಂತ ಸಂಭವಿಸಿದೆ. ಬೇಸಿಗೆಯಲ್ಲಿ

ಎತ್ತುಗಳಿಗೆ ತಿನ್ನಿಸಲು ಅಂದಾಜು 70ಸಾವಿರ ರೂ. ಮೌಲ್ಯದ ಜೋಳದ ಕಣಕಿ ಮೇವು ಖರೀದಿಸಿ ಹೊಲದಲ್ಲಿ ಬಣವಿ ಒಟ್ಟಲಾಗಿತ್ತು. ಸೋಮವಾರ ರಾತ್ರಿ ಈ ಮೇವು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಕಿ ಹೇಗೆ ಹತ್ತಿಕೊಂಡಿತು ಎಂಬುದು ಗೊತ್ತಾಗಿಲ್ಲ. ವಾಡಿ ಪೊಲೀಸ್ ಠಾಣೆಗೆ ರೈತ ಯಂಕಣ್ಣ ದೂರು ನೀಡಿದ್ದಾರೆ.

Next Article