For the best experience, open
https://m.samyuktakarnataka.in
on your mobile browser.

ಅಣ್ಣನ ಮಗನನ್ನೇ ಶೂಟ್ ಮಾಡಿ ಹತ್ಯೆ ಮಾಡಿರುವ ಚಿಕ್ಕಪ್ಪ

07:44 PM Nov 04, 2023 IST | Samyukta Karnataka
ಅಣ್ಣನ ಮಗನನ್ನೇ ಶೂಟ್ ಮಾಡಿ ಹತ್ಯೆ ಮಾಡಿರುವ ಚಿಕ್ಕಪ್ಪ

ಮಂಡ್ಯ: ಅಣ್ಣನ ಮಗನನ್ನೇ ಶೂಟ್ ಮಾಡಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹನುಮನಹಳ್ಳಿಯಲ್ಲಿ ನಡೆದಿರುವ ಅಮಾನವೀಯ ಘಟನೆ ನಡೆದಿದ್ದು, ವಾಸು ಎಂಬುವರ ಮಗ ಜೈಪಾಲ್ ಎಂಬ 19 ವರ್ಷದ ಯುವಕನೇ ಚಿಕ್ಕಪ್ಪನ ಗುಂಡೇಟಿಗೆ ಬಲಿಯಾಗಿರುವ ದುರ್ದೈವಿ ಆಗಿದ್ದಾನೆ.
ಸೀಮೆಎಣ್ಣೆ ಕುಮಾರ್ ಎಂಬ ರೌಡಿ ಶೀಟರ್ ಎಂಬುವನೇ ತನ್ನ ಅಣ್ಣನ ಮಗನನ್ನು ಹತ್ಯೆ ಮಾಡಿರುವ ಆರೋಪಿ.
ಪರವಾನಗಿ ಪಡೆದು ತನ್ನಲ್ಲೇ ಇಟ್ಟುಕೊಂಡಿದ್ದ ಗನ್ ನಿಂದ ಮಾತು-ಕತೆಯ ಸಂದರ್ಭದಲ್ಲಿ ಏಕಾ ಏಕಿ ಗುಂಡು ಹಾರಿಸಿರುವ ಕುಮಾರ್ ಪರಾರಿಯಾಗಿದ್ದಾನೆ, ಇನ್ನು ಗುಂಡೇಟಿನ ತೀವ್ರತೆಗೆ ರಕ್ತಸ್ರಾವದಿಂದ ಕುಸಿದು ಬಿದ್ದಿರುವ ಜೈಪಾಲ್ ಸ್ಥಳದಲ್ಲೇ ಸಾವನ್ನಪಿದ್ದಾನೆ.ಗುಂಡಿನ ಸದ್ದಿಗೆ ಬೆಚ್ಚಿಬಿದ್ದಿರುವ ಸ್ಥಳೀಯರು ದಿಕ್ಕಾಪಾಲಾಗಿ ಓಟ ಕಿತ್ತಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಹತ್ಯೆಗೈದು ಪರಾರಿಯಾಗಿರುವ ಕುಮಾರ್ ಪತ್ತೆಗಾಗಿ ಪೋಲೀಸರು ವ್ಯಾಪಕ ಬಲೆ ಬೀಸಿದ್ದಾರೆ.
ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.