For the best experience, open
https://m.samyuktakarnataka.in
on your mobile browser.

ಅತ್ಯಾಚಾರ ಪ್ರಕರಣ: ರಾಜ್ಯಪಾಲರಿಂದ ಸಹಾಯವಾಣಿ ಆರಂಭ

01:57 PM Aug 20, 2024 IST | Samyukta Karnataka
ಅತ್ಯಾಚಾರ ಪ್ರಕರಣ  ರಾಜ್ಯಪಾಲರಿಂದ ಸಹಾಯವಾಣಿ ಆರಂಭ

ಕೋಲ್ಕತಾ: ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಭೀಕರ ಅತ್ಯಾಚಾರ ಮತ್ತು ಭಯಾನಕ ಹತ್ಯೆ ಪ್ರಕರಣದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ಅದರ ಬೆನ್ನಲ್ಲೇ ಬಂಗಾಳದ ರಾಜ್ಯಪಾಲ ಡಾ.ಸಿ.ವಿ.ಆನಂದ ಬೋಸ್ ಅವರು ಮಹಿಳೆಯರ ರಕ್ಷಣೆಗಾಗಿ ಸಹಾಯವಾಣಿ ತೆರೆದಿದ್ದಾರೆ. 03322001641 ಮತ್ತು 92890 10682 ಸಂಖ್ಯೆಗಳ ಮೂಲಕ ದೂರುಗಳನ್ನು ಸಲ್ಲಿಸಬಹುದಾಗಿದೆ.