For the best experience, open
https://m.samyuktakarnataka.in
on your mobile browser.

ಅನಂತಕುಮಾರ ಹೆಗಡೆ ಹುಚ್ಚ

09:30 PM Mar 11, 2024 IST | Samyukta Karnataka
ಅನಂತಕುಮಾರ ಹೆಗಡೆ ಹುಚ್ಚ

ಕಾರಟಗಿ: ಸಂಸದ ಅನಂತಕುಮಾರ ಹೆಗಡೆ ಓರ್ವ ಹುಚ್ಚ, ಬಿಜೆಪಿಯವರು ಆದಷ್ಟು ಬೇಗ ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತಕುಮಾರ ಹೆಗಡೆಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಹೀಗಾಗಿ ಆತ ಏನೇನೋ ಮಾತನಾಡುತ್ತಾನೆ. ಸಂವಿಧಾನ ಬದಲಾವಣೆ ಮಾಡಲು ಆತನ್ಯಾರು?, ಅವನಿಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದರು.
ಇನ್ನು ಬಿಜೆಪಿಯವರಿಗೆ ಚುನಾವಣೆ ಬಂದಾಗ ಪಾಕಿಸ್ತಾನ್ ನೆನಪಾಗುತ್ತದೆ. ಅವರಿಗೆ ಬಡವರು ನೆನಪಾಗೋದಿಲ್ಲ. ಬರಗಾಲದ ಸಮಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಮಾನವ ದಿನಗಳನ್ನು ಹೆಚ್ಚಿಸಬೇಕಿತ್ತು. ನೂರರಿಂದ ನೂರಾ ಐವತ್ತು ರೂ. ಹೆಚ್ಚಿಸಬೇಕಿತ್ತು. ಆದರೆ, ಇಲ್ಲಿಯವರೆಗೆ ಕೇಂದ್ರ ಸರ್ಕಾರ ಕೆಲಸದ ದಿನ ಹೆಚ್ಚಿಸಿಲ್ಲ. ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಈ ಬಾರಿ ಬಡವರ ಹತ್ತಿರ ಹೋಗಲಿ ಅವರ ಬಣ್ಣ ಬಯಲಾಗುತ್ತೆ ಎಂದು ತಂಗಡಗಿ ಕುಟುಕಿದರು.