For the best experience, open
https://m.samyuktakarnataka.in
on your mobile browser.

ಅಪಘಾತಕ್ಕೀಡಾಗಿದ್ದ ಕಾರು ಎಳೆದೊಯ್ಯುತ್ತಿದ್ದ ವೇಳೆ ಬೆಂಕಿಗಾಹುತಿ

12:26 PM May 22, 2024 IST | Samyukta Karnataka
ಅಪಘಾತಕ್ಕೀಡಾಗಿದ್ದ ಕಾರು ಎಳೆದೊಯ್ಯುತ್ತಿದ್ದ ವೇಳೆ ಬೆಂಕಿಗಾಹುತಿ

ಚಿಕ್ಕಮಗಳೂರು: ಅಪಘಾತವಾಗಿದ್ದ ಕಾರನ್ನು ಟೋಯಿಂಗ್ ಮೂಲಕ ಎಳೆದೊಯ್ಯುವಾಗ ರಸ್ತೆ ಪಕ್ಕದಲ್ಲಿ ಹಾಕಿದ್ದ ಟಿಂಬ‌ರ್ ಮರಗಳಿಗೆ ಢಿಕ್ಕಿ ಹೊಡೆದು ಕಾರು ಸಂಪೂರ್ಣ ಭಸ್ಮವಾದ ಘಟನೆ ಕಳಸ ತಾಲೂಕಿನ ಸಂಸೆ ಸಮೀಪದ ಬಾಲ್ಗಲ್ ಬಳಿ ನಡೆದಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಮಧ್ಯೆ ಧಗ-ಧಗ ಹೊತ್ತಿ ಉರಿದು ಕಾರೊಂದು ಸಂಪೂರ್ಣ ಭಸ್ಮವಾಗಿದೆ.

ಅಪಘಾತವಾಗಿದ್ದ ಕಾರನ್ನ ಟೋಯಿಂಗ್ ಮೂಲಕ ಎಳೆದೊಯ್ಯುವಾಗ ಅವಘಡ ಸಂಭವಿಸಿದೆ. ಅಪಘಾತವಾಗಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ರಸ್ತೆ ಮಧ್ಯೆ ಧಗಧಗ ಉರಿದು, ಕಾರು ಸುಟ್ಟು ಕರಕಲಾಗಿದೆ.

ಕಳಸ ತಾಲೂಕಿನ ಸಂಸೆಯ ಬಾಲ್ಕಲ್ ಬಳಿ ಘಟನೆ ನಡೆದಿದ್ದು, ಅಪಘಾತವಾದ ಕಾರನ್ನ ಮಂಗಳೂರಿಗೆ ಎಳೆದೊಯ್ಯುವ ವೇಳೆ ದುರ್ಘಟನೆ ಸಂಭವಿಸಿದೆ, ಕಳಸ ತಾಲೂಕಿನ ಸಂಸೆಯ ಬಾಲ್ಗಲ್ ತಿರುವಿನಲ್ಲಿ ಅಪಘಾತವಾಗಿ ಕಾರು ಕೆಟ್ಟು ನಿಂತಿತ್ತು. ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರಕ್ಕೆ ಎಳೆಯುತ್ತಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.