For the best experience, open
https://m.samyuktakarnataka.in
on your mobile browser.

ಅಪಘಾತ: ಆರು ಜನ ಸಾವು

05:47 PM Feb 22, 2024 IST | Samyukta Karnataka
ಅಪಘಾತ  ಆರು ಜನ ಸಾವು

ಖಾನಾಪುರ: ಮರಕ್ಕೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಜನ ಮೃತಪಟ್ಟ ಘಟನೆ ತಾಲೂಕಿನ ಬೀಡಿ-ಕಿತ್ತೂರ ರಸ್ತೆಯಲ್ಲಿ ನಡೆದಿದೆ.
ಕಿತ್ತೂರಿನಿಂದ ಬೀಡಿ ಗ್ರಾಮದತ್ತ ಹೊರಟಿದ್ದ ಪ್ರಯಾಣಿಕರ ಕಾರು ಮಂಗೇನಕೊಪ್ಪ ಗ್ರಾಮದ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ ವೇಗವಾಗಿ ಅಪ್ಪಳಿಸಿದ್ದರಿಂದ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಹೆಸರು, ಊರು ಮತ್ತಿತರ ಮಾಹಿತಿ ತಿಳಿದು ಬಂದಿಲ್ಲ.