For the best experience, open
https://m.samyuktakarnataka.in
on your mobile browser.

ಅಪಘಾತ: ಶಾಸಕ ವಿನಯ ಕುಲಕರ್ಣಿ ಮಗನಿಗೆ ಗಾಯ

08:08 PM Apr 11, 2024 IST | Samyukta Karnataka
ಅಪಘಾತ  ಶಾಸಕ ವಿನಯ ಕುಲಕರ್ಣಿ ಮಗನಿಗೆ ಗಾಯ

ಬೆಂಗಳೂರು: ಬೆಳ್ಳಂದೂರು ಹೊರವರ್ತುಲ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿ ಅವರ ಪುತ್ರ ಹೇಮಂತ್‌(19) ಗಾಯಗೊಂಡಿದ್ದಾರೆ.
ಬೈಕ್‌ನಲ್ಲಿ ಹೊರಟಿದ್ದ ಹೇಮಂತ್‌ ಮಾರ್ಗಮಧ್ಯೆ ಬೈಕ್‌ ನಿಯಂತ್ರಣ ತಪ್ಪಿದ್ದು, ಉರುಳಿ ಬಿದ್ದಿದ್ದಾರೆ. ಈ ವೇಳೆ ಅವರ ಕಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತಂತೆ ಬೆಳ್ಳಂದೂರು ಸಂಚಾರ ಠಾಣೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.