For the best experience, open
https://m.samyuktakarnataka.in
on your mobile browser.

“ಅಪರಾಧ” ಕ್ಕೆ ಮೂರು ದಶಕಗಳಾಯಿತೆೇ?

12:41 PM Nov 12, 2023 IST | Samyukta Karnataka
“ಅಪರಾಧ” ಕ್ಕೆ ಮೂರು ದಶಕಗಳಾಯಿತೆೇ

ಬೆಂಗಳೂರು: “ಅಪರಾಧ” ಕ್ಕೆ ಮೂರು ದಶಕಗಳಾಯಿತೆೇ? ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು " ನಂಬೋದು ಕಷ್ಟ. ಆದರೆ ನಂಬಲೇಬೇಕು. ಹೊಸಬರ ಜತೆಗೂಡಿ ಮಾಡಿದ ನನ್ನ ಎರಡನೆಯ “ಅಪರಾಧ” ಕ್ಕೆ ಮೂರು ದಶಕಗಳಾಯಿತೆೇ?" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶಿಸಿದ ಬಾ ನಲ್ಲೆ ಮಧುಚಂದ್ರಕೆ ಚಿತ್ರ ತೆರೆಕಂಡು ಇಂದಿಗೆ ಮೂರು ದಶಕಗಳಾಯಿತು, ಊರ್ಮಿಳಾ ಬಾಬು ನಿರ್ಮಾಪಕರಾಗಿದ್ದು, ಪಾತ್ರವರ್ಗದಲ್ಲಿ ಕೆ. ಶಿವರಾಂ ನಂದಿನಿ ಪ್ರಕಾಶ್ ರೈ, ಮಾನು, ಪದ್ಮಾ ಕುಮಟ, ದತ್ತಾತ್ರೇಯ, ಭಾರ್ಗವಿ ನಾರಾಯಣ್, ಸುಂದರ್ ರಾಜ್ ಅಭಿನಯಿಸಿದ್ದಾರೆ, ಈ ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿದ್ದು, ಈ ಚಿತ್ರದಲ್ಲಿ ಬರುವ ಎಲ್ಲಾ ಗೀತೆಗಳು ಸೂಪರ್‌ ಹಿಟ್‌ ಆಗಿದ್ದವು ಇಂದಿಗೂ ಗುನಗುನಿಸುವಂತೆ ಇವೆ.