For the best experience, open
https://m.samyuktakarnataka.in
on your mobile browser.

ಅತ್ಯಾಚಾರ‌ ಆರೋಪಿ ಕಾಲಿಗೆ ಗುಂಡೇಟು

09:46 AM May 04, 2024 IST | Samyukta Karnataka
ಅತ್ಯಾಚಾರ‌ ಆರೋಪಿ ಕಾಲಿಗೆ ಗುಂಡೇಟು

ಧಾರವಾಡ: ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಗೆ ಗರ್ಭಿಣಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಸದ್ದಾಂಗೆ ಗುಂಡೇಟು ನೀಡಿದ್ದಾರೆ. ಆರೋಪಿಯನ್ನು ಹುಬ್ಬಳ್ಳಿ ಠಾಣೆಯಿಂದ ಧಾರವಾಡ ಠಾಣೆಗೆ ಸ್ಥಳಾಂತರ ಮಾಡುವಾಗ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ ಈ ವೇಳೆ ಪೊಲೀಸರು ಗುಂಡೇಟು ನೀಡಿದ್ದಾರೆ.

ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ತನಿಖೆಗಾಗಿ ಧಾರವಾಡಕ್ಕೆ ಶಿಫ್ಟ್ ಮಾಡುವಾಗ ಆರೋಪಿ ಸದ್ದಾಂ ಪೊಲೀಸರ ಮೇಲೆ‌ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹೊಡೆಯಲಾಗಿದೆ.

ಧಾರವಾಡ ಜಿಲ್ಲಾ ಆಸ್ಪತ್ರೆಗೆ ಆರೋಪಿ ದಾಖಲಿಸಿ ಗುಂಡು ತಾಗಿದ ಕಾಲಿಗೆ ವೈದ್ಯರು ಚಿಕಿತ್ಸೆ ನೀಡಿದ್ದು, ಬಳಿಕ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.
ಅಲ್ಲದೇ ದಾಳಿಯಲ್ಲಿ ಗಾಯಗೊಂಡ ಧಾರವಾಡ ವಿದ್ಯಾಗಿರಿ ಠಾಣೆಯ ಸಿಪಿಐ ಸಂಗಮೇಶ‌ ದಿಡಿಗನಾಳ ಮತ್ತು ಪೇದೆ ಅರುಣ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ ಜಿಲ್ಲಾಸ್ಪತ್ರಗೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿ‌ ಮಾಹಿತಿ ಪಡೆದುಕೊಂಡರು.