For the best experience, open
https://m.samyuktakarnataka.in
on your mobile browser.

ಅಪಘಾತ: ಓರ್ವ ಸಾವು, ೧೭ ಜನ ಗಂಭೀರ

10:36 PM Jan 03, 2024 IST | Samyukta Karnataka
ಅಪಘಾತ  ಓರ್ವ ಸಾವು  ೧೭ ಜನ ಗಂಭೀರ

ವಿಜಯಪುರ(ತಾಳಿಕೋಟೆ): ಶಹಾಪೂರ ತಾಲೂಕಿನ ಪರಸನಳ್ಳಿ ಗ್ರಾಮದಿಂದ ತಾಳಿಕೋಟೆ ಪಟ್ಟಣದಲ್ಲಿ ನಡೆಯುತ್ತಿದ್ದ ಮದುವೆಯೊಂದಕ್ಕೆ ಆಗಮಿಸಿದ್ದ ಮದುವೆ ದಿಬ್ಬಣದ ಕ್ರೂಸರ್ ವಾಹನ ಮತ್ತು ಕಾರ್ ನಡುವೆ ಸಂಭವಿಸಿದ ಮುಖಾಮುಕಿ ಡಿಕ್ಕಿಯಲ್ಲಿ ಓರ್ವ ಸ್ಥಳದಲ್ಲಿಯೇ ಸಾವನಪ್ಪಿದ್ದು, ೧೭ ಜನರಿಗೆ ಗಂಭೀರ ಗಾಯಗಳಾದ ಘಟನೆ ಬುಧವಾರ ಸಂಜೆ ನಡೆದಿದೆ.
ಸಂಗಮೇಶ ಗುರಣ್ಣ ಹುಲಸೂರ ಮೃತ ದುರ್ದೈವಿ. ತಾಳಿಕೋಟೆ ಪಟ್ಟಣದಲ್ಲಿ ನಡೆಯುತ್ತಿದ್ದ ಮದುಗೆ ಬೆಳಿಗ್ಗೆ ಕ್ರೂಸರ್ ವಾಹನದಲ್ಲಿ ಆಗಮಿಸಿದ್ದ ೧೭ ಜನರು, ಮದುವೆ ಮುಗಿಸಿಕೊಂಡು ಸಂಜೆ ಮರಳಿ ಪರಸನಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಎಲ್ಲ ಗಾಯಾಳುಗಳನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ರಾಮನಗೌಡ ಸಂಕನಾಳ, ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್.ಭಂಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.