For the best experience, open
https://m.samyuktakarnataka.in
on your mobile browser.

ಗುದನಾಳದಲ್ಲಿ ಬಚ್ಚಿಟ್ಟು ಚಿನ್ನ ಸಾಗಿಸುತ್ತಿದ್ದವನ ಬಂಧನ

09:16 PM Apr 12, 2024 IST | Samyukta Karnataka
ಗುದನಾಳದಲ್ಲಿ ಬಚ್ಚಿಟ್ಟು ಚಿನ್ನ ಸಾಗಿಸುತ್ತಿದ್ದವನ ಬಂಧನ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಗುದನಾಳದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 58 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿದ್ದಾರೆ.
ಗುರುವಾರ ದುಬೈನಿಂದ ಆಗಮಿಸಿದ ವಿಮಾನದಲ್ಲಿದ್ದ ದ.ಕ. ಜಿಲ್ಲೆಯ ಪ್ರಯಾಣಿಕನೊಬ್ಬ 812 ಗ್ರಾಂ ತೂಕದ 24 ಕ್ಯಾರೆಟ್‌ ಚಿನ್ನವನ್ನು ಗುದನಾಳದಲ್ಲಿರಿಸಿ ಸಾಗಿಸುತ್ತಿದ್ದು ಪತ್ತೆಯಾಗಿತ್ತು. ಅಂಡಾಕಾರದ ಮೂರು ವಸ್ತುಗಳನ್ನು ಚಿನ್ನವನ್ನು ಪೇಸ್ಟ್‌ ರೂಪದಲ್ಲಿ ಮರೆಮಾಡಿ ಕಳ್ಳಸಾಗಾಟ ಮಾಡುತ್ತಿರುವುದನ್ನು ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ವೇಳೆ ಜಪ್ತಿ ಮಾಡಿದ್ದಾರೆ. ವಶಪಡಿಸಿದ ಚಿನ್ನದ ಮೌಲ್ಯ 58,78,880 ರೂ. ಎಂದು ಹೇಳಲಾಗಿದೆ. ಪ್ರಯಾಣಿಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.