For the best experience, open
https://m.samyuktakarnataka.in
on your mobile browser.

ಜೆಸ್ಕಾಂ ಕಛೇರಿ ಅವರಣದಲ್ಲಿ ಬೆಂಕಿ : ಗಲಿಬಿಲಿ ವಾತಾವರಣ

02:33 PM May 26, 2024 IST | Samyukta Karnataka
ಜೆಸ್ಕಾಂ ಕಛೇರಿ ಅವರಣದಲ್ಲಿ ಬೆಂಕಿ   ಗಲಿಬಿಲಿ ವಾತಾವರಣ

ಬೀದರ್ : ಇಲ್ಲಿಯ ಪ್ರಧಾನ ಕಚೇರಿಯ ಆವರಣದಲ್ಲಿಯ ಟ್ರಾನ್ಸ ಫಾರ್ಮರ್ ರಿಪೇರಿ ಸೆಂಟರ್ ನಲ್ಲಿ ಅಗ್ನಿ ಅವಘಡ ಸಂಭವಿಸಿ ಸ್ವಲ್ಪ ಹೊತ್ತು ಗಲಿಬಿಲಿ ವಾತಾವರಣ ಸೃಷ್ಟಿಯಾಗಿತ್ತು. ಸಿಬ್ಬಂದಿಗಳು ಪ್ರಾಣಭಯದಿಂದ ಹೊರ ಓಡಿ ಬಂದರು. ಸುದ್ದಿ ತಿಳಿದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿನಂದಿಸಿದರಲ್ಲದೆ ಸಂಭವನೀಯ ಅನಾಹುತ ತಪ್ಪಿಸಿದರು. ಅಗ್ನಿ ಅವಾಂತರಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಂದು ಶಂಕಿಸಲಾಗಿದೆ.