ಪಟಾಕಿ ಘಟಕದಲ್ಲಿ ಸ್ಫೋಟ: 9 ಜನ ಸಾವು, 22 ಜನರಿಗೆ ಗಾಯ
06:59 PM May 09, 2024 IST
|
Samyukta Karnataka
ತಮಿಳುನಾಡು: ಪಟಾಕಿ ಸ್ಫೋಟದಲ್ಲಿ ಒಂಬತ್ತು ಜನ ಮೃತಪಟ್ಟು, 22 ಜನರು ಗಾಯಗೊಂಡ ಘಟನೆ ಶಿವಕಾಶಿ ಬಳಿಯ ಪಟಾಕಿ ಕಾರ್ಖಾನೆಯಲ್ಲಿ ನಡೆದಿದೆ.
ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಫೋಟಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಸಂತಾಪ ಸೂಚಿಸಿದ್ದು, ಭಾರತ ಚುನಾವಣಾ ಆಯೋಗ ಅನುಮತಿ ನೀಡಿದ ನಂತರ ಮೃತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೆರವು ಘೋಷಿಸಲಿದೆ ಎಂದು ಹೇಳಿದ್ದಾರೆ.
Next Article