For the best experience, open
https://m.samyuktakarnataka.in
on your mobile browser.

ಹುಬ್ಬಳ್ಳಿಯ ಶಿಕ್ಷಕಿಗೆ ಬೆದರಿಕೆ ಪತ್ರ: ನೇಹಾ, ಅಂಜಲಿ ಹಾಗೆಯೇ ನಿನ್ನ ಹತ್ಯೆ ಆಗುತ್ತೆ

07:17 PM Jun 01, 2024 IST | Samyukta Karnataka
ಹುಬ್ಬಳ್ಳಿಯ ಶಿಕ್ಷಕಿಗೆ ಬೆದರಿಕೆ ಪತ್ರ  ನೇಹಾ  ಅಂಜಲಿ ಹಾಗೆಯೇ ನಿನ್ನ ಹತ್ಯೆ ಆಗುತ್ತೆ

ಹುಬ್ಬಳ್ಳಿ: ಹುಬ್ಬಳ್ಳಿಯ ಖಾಸಗಿ ಶಾಲಾ ಶಿಕ್ಷಕಿಗೂ ಬೆದರಿಕೆ ಪತ್ರ ಬಂದಿದೆ, ನಗರದ ಖಾಸಗಿ ಶಾಲೆಯ ಮುಖ್ಯ ಶಿಕ್ಷಕಿ ದೀಪಾಗೆ ಬೆದರಿಕೆ ಪತ್ರ ಬಂದಿದೆ.
ಹುಬ್ಬಳ್ಳಿಯ ಖಾಸಗಿ ಶಾಲೆ ಶಿಕ್ಷಕಿಗೆ ಬಂದಿರುವ ಪತ್ರದಲ್ಲಿ "ದೀಪಾ, ನಿನ್ನ ಹತ್ಯೆ ನೇಹಾ ಅಂಜಲಿ ಹಾಗೆಯೇ ಕೆಲವೆ ದಿನ" ಎಂದು ಬರೆದಿರುವ ಪತ್ರ ಬಂದಿದ್ದು, ಪತ್ರ ಕಂಡು ಆತಂಕಗೊಂಡ ಶಿಕ್ಷಕಿ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಶ್ವಾಪುರ ಪೊಲೀಸ‌ ಠಾಣೆಗೆ ದೂರು ನೀಡಿದ್ದು ಮೇ 28 ರಂದು ಬೆಳಗ್ಗೆ ಪೋಸ್ಟ್ ಮ್ಯಾನ್ ಬಂದು ಪತ್ರ ತಲುಪಿಸಿದ್ದರು ಕಿಡಿಗೇಡಿ ಕೃತ್ಯವಾ? ಅಥವಾ ಉದ್ದೇಶ ಪೂರ್ವಕವಾಗಿ ಬರೆದಿದ್ದ‌ ಎಂಬುದರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.