For the best experience, open
https://m.samyuktakarnataka.in
on your mobile browser.

ಅಪ್ರಾಪ್ತರಿಗೆ ಕಿರುಕುಳ: ಬದ್ಲಾಪುರ್ ನಿಲ್ದಾಣದಲ್ಲಿ ರೈಲು ತಡೆ

01:16 PM Aug 20, 2024 IST | Samyukta Karnataka
ಅಪ್ರಾಪ್ತರಿಗೆ ಕಿರುಕುಳ  ಬದ್ಲಾಪುರ್ ನಿಲ್ದಾಣದಲ್ಲಿ ರೈಲು ತಡೆ

ಮಹಾರಾಷ್ಟ್ರ : ಅಪ್ರಾಪ್ತರಿಗೆ ಕಿರುಕುಳ ನೀಡಿದ್ದರಿಂದ ಕೋಪಗೊಂಡ ಪೋಷಕರು ಮತ್ತು ಬದ್ಲಾಪುರ ನಿವಾಸಿಗಳು ಆದರ್ಶ ಶಾಲೆಯ ಎದುರು ಪ್ರತಿಭಟನೆ ನಡೆಸಿದರು.
ಬದ್ಲಾಪುರ ರೈಲು ನಿಲ್ದಾಣದಲ್ಲಿ ಧರಣಿ ನಡೆಸಿದ್ದರಿಂದ ಮುಂಬೈನಿಂದ ಬರುವ ಹಾಗೂ ಮುಂಬೈಗೆ ಹೋಗುವ ಎರಡೂ ರೈಲು ಸಂಚಾರಕ್ಕೆ ಅಡಚಣೆಯಾಯಿತು, ಬೆಳಿಗ್ಗೆ 6:30 ರಿಂದ ಬದ್ಲಾಪುರ ಪೂರ್ವದ ಆದರ್ಶ ಶಾಲೆಯ ಮುಂದೆ ಪೋಷಕರು ಮತ್ತು ನಾಗರಿಕರು ಪ್ರತಿಭಟನೆ ಆರಂಭಿಸಿದ್ದರು. ಈ ಪ್ರತಿಭಟನಾಕಾರರಲ್ಲಿ ಕೆಲವರು ಬದ್ಲಾಪುರ ರೈಲು ನಿಲ್ದಾಣದ ಕಡೆಗೆ ತಮ್ಮ ಮೆರವಣಿಗೆಯನ್ನು ಬದಲಾಯಿಸಿದರು. ಬೆಳಿಗ್ಗೆ 10:30 ರ ಸುಮಾರಿಗೆ ಪ್ರತಿಭಟನಾಕಾರರು ಮುಂಬೈ ಮತ್ತು ಮುಂಬೈಗೆ ಹೋಗುವ ರೈಲು ಸಂಚಾರವನ್ನು ತಡೆದರು. ಪ್ರತಿಭಟನಾಕಾರರು ರೈಲು ಹಳಿಗಳ ಮೇಲೆ ಕುಳಿತುಕೊಂಡಿದ್ದರಿಂದ ಸ್ಥಳೀಯ ಸಂಚಾರ ಸ್ಥಗಿತಗೊಂಡಿತ್ತು. ಹನ್ನೊಂದು ಗಂಟೆಯವರೆಗೂ ಪೊಲೀಸರು ಮತ್ತು ರೈಲ್ವೇ ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು

Tags :