For the best experience, open
https://m.samyuktakarnataka.in
on your mobile browser.

ಆಪರೇಶನ್ ಕಮಲ: ಸ್ವಲ್ಪ ಕಾದು ನೋಡಿ

01:33 PM Nov 12, 2023 IST | Samyukta Karnataka
ಆಪರೇಶನ್ ಕಮಲ  ಸ್ವಲ್ಪ ಕಾದು ನೋಡಿ

ಹುಬ್ಬಳ್ಳಿ: ಆಪರೇಶನ್ ಕಮಲ ವಿಚಾರ, ಸ್ವಲ್ಪ ಕಾದು ನೋಡಿ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಪರೇಶನ್ ಕಮಲ ನಡೀತಿದೆ ಎಂಬ ಪ್ರಶ್ನೆಗೆ ಕಾದು ನೋಡಿ ಎಂದರು.
ರಾಜ್ಯದಲ್ಲಿ ಈ ಸರ್ಕಾರ ಐದು ವರ್ಷ ಇರಲಿ ಎಂದು ನಾವು ಎಂದುಕೊಳ್ಳುತ್ತೇವೆ. ಕಾಂಗ್ರೆಸ್‌ನಲ್ಲಿಯೇ ಅಲೆಯನ್ಸ್ ಸರ್ಕಾರ ಇದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಖರ್ಗೆ, ಪರಮೇಶ್ವರ ಎಂದು ಅಲೆಯನ್ಸ್ ಇವೆ. ಹೀಗಾಗಿ ಅವರವರಲ್ಲಿಯೇ ಕಚ್ಚಾಟ ಇವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಐದು ವರ್ಷ ಇರಲಿಲ್ಲ ಅಂದ್ರೆ ನಾವೇನ ಮಾಡೋಕೆ ಆಗಲ್ಲ. ಅವರವರ ಜಗಳದಲ್ಲಿಯೇ ಸರ್ಕಾರ ಹೋಗತ್ತದೆ. ನಾವು ಆಪರೇಶನ್ ಕಮಲ ಮಾಡಲ್ಲ ಎಂದರು.