For the best experience, open
https://m.samyuktakarnataka.in
on your mobile browser.

ಆಫರ್ ಕೊಟ್ಟವರು ಯಾರು..?

03:46 PM Mar 02, 2024 IST | Samyukta Karnataka
ಆಫರ್ ಕೊಟ್ಟವರು ಯಾರು

ಮೈಸೂರು: ಸಿಎಂ 50 ಕೋಟಿ ರೂ. ಆಫರ್ ಕೊಟ್ಟಿದ್ದು ಯಾರು ಎಂಬುದನ್ನ ಹೇಳಲಿ. 50 ಕೋಟಿ ರೂ. ಆಫರ್ ಕೊಟ್ಟವರನ್ನು ಮೊದಲು ಜೈಲಿಗೆ ಕಲುಹಿಸಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿರುವ ಅವರು 50 ಕೋಟಿ ರೂ. ಆಫರ್ ಕೊಟ್ಟವರನ್ನು ಮೊದಲು ಜೈಲಿಗೆ ಕಲುಹಿಸಲಿ. ಇಲ್ಲದಿದ್ದರೆ ನಾನು ರಾಜಕೀಯಕ್ಕಾಗಿ ಸುಳ್ಳು ಹೇಳಿದ್ದೇನೆ ಎಂದು ಜನರ ಕ್ಷಮೆ ಕೇಳಲಿ. ಸಿಎಂ ಬಾಯಲ್ಲಿ ಈ ರೀತಿಯ ಮಾತು ಬರಬಾರದು. ಮಾತು ಬಂದ ಮೇಲೆ ಅದಕ್ಕೆ ಸಾಕ್ಷಿ ಕೊಡಬೇಕು. ಎಸ್.ಟಿ ಸೋಮಶೇಖರ್‌ಗೆ ವೋಟ್ ಹಾಕಿಸಿಕೊಳ್ಳಲು ಎಷ್ಟು ಕೋಟಿ ಕೊಟ್ರು. ಶಿವರಾಂ ಹೆಬ್ಬಾರ್ ವೋಟ್ ಹಾಕದಂತೆ ತಡೆಯಲು ಎಷ್ಟು ಹಣ ಕೊಟ್ರಿ. ಮೊದಲು ಅದನ್ನು ಹೇಳಿ ಎಂದು ತಾಕಿತುಮಾಡಿದರು.

ಜಾತಿಜನಗಣತಿ ವರದಿ: ಸಿಎಂಗೆ ತಾಕತ್ ಇದ್ದರೆ ಜಾತಿಗಣತಿಯನ್ನ ಸಂಪುಟದಲ್ಲಿ ಇಡಲಿ. ವಿಧಾನಸೌಧದಲ್ಲಿ ಚರ್ಚೆಗೆ ಇಡಲಿ. ಕಾಂಗ್ರೆಸ್‌ನವರೇ ಪರಸ್ಪರ ಹೊಡೆದಾಡಿಕೊಳ್ಳದಿದ್ದರೆ ನೋಡಿ. ಜಾತಿ ಜಾತಿಗಳ ನಡುವೆ ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ‌. ಹಿಂದುಳಿದ ವರ್ಗಗಳ ಚಾಂಪಿಯನ್ ಎನ್ನಿಸಿಕೊಳ್ಳಲು ಹಿಂದು ಸಮಾಜವನ್ನ ಜಾತಿ ಹೆಸರಿನಲ್ಲಿ ಹೊಡೆಯುತ್ತಿದ್ದಾರೆ. ನೀವು ಮುಸ್ಲೀಂರ ಪರ ಇರಿ. ಬಿಜೆಪಿ ಹಿಂದೂಗಳ ಪರ ಇರುತ್ತದೆ ಎಂದರು.