For the best experience, open
https://m.samyuktakarnataka.in
on your mobile browser.

ಆರ್​ಸಿಬಿ ಕನ್ನಡಿಗರನ್ನು ನಿರ್ಲಕ್ಷಿಸುತ್ತಿದೆ

07:39 PM Dec 25, 2023 IST | Samyukta Karnataka
ಆರ್​ಸಿಬಿ ಕನ್ನಡಿಗರನ್ನು ನಿರ್ಲಕ್ಷಿಸುತ್ತಿದೆ

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಆರ್​ಸಿಬಿ ಕರ್ನಾಟಕ ಆಟಗಾರರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಅಭಿಮಾನಿಗಳು ಕೋಪಗೊಂಡಿದ್ದಾರೆ.
ಅಭಿಮಾನಿಗಳು ಮೈದಾನದಲ್ಲಿ ರಾಬಿನ್ ಉತ್ತಪ್ಪ ಅವರಿಗೆ ಆರ್​ಸಿಬಿ ಸೇರಿಕೊಳ್ಳಿ ಎಂದಿದ್ದಕ್ಕೆ, ಇಲ್ಲಿನ ಆಟಗಾರರನ್ನು ತೆಗೆದುಕೊಳ್ಳಲ್ಲ ಎಂದು ಬೇಸರದಿಂದಲೇ ಹೇಳಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕರ್ನಾಟಕ ತಂಡಕ್ಕಾಗಿ ಆಡುವ ಅತ್ಯುತ್ತಮ ಆಟಗಾರರು ಇದ್ದರೂ ಆರ್​ಸಿಬಿ ಅವರನ್ನು ನಿರ್ಲಕ್ಷಿಸುತ್ತಿದೆ ಎಂದು ಹೇಳಿದ್ದಾರೆ. ಐಪಿಎಲ್ 2024ರ ಮಿನಿ ಹರಾಜಿನಲ್ಲಿ ಮನೀಷ್ ಪಾಂಡೆ ಮೂಲಬೆಲೆ 50 ಲಕ್ಷ ಹೊಂದಿದ್ದರೂ ಆರ್​ಸಿಬಿ ಖರೀದಿ ಮಾಡಲಿಲ್ಲ. ಕೆಕೆಆರ್ ಖರೀದಿಸಿತ್ತು. ಸ್ಪಿನ್ನರ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಕೂಡ ಮೂಲಬೆಲೆ 20 ಲಕ್ಷ ರೂಪಾಯಿಗೆ ಮುಂಬೈ ಇಂಡಿಯನ್ಸ್ ಖರೀದಿಸಿತ್ತು.