For the best experience, open
https://m.samyuktakarnataka.in
on your mobile browser.

ಇಬ್ಬರು ಶೂಟರ್ ಬಂಧನ

05:15 PM Mar 04, 2024 IST | Samyukta Karnataka
ಇಬ್ಬರು ಶೂಟರ್ ಬಂಧನ

ಪಣಜಿ: ಭಾರತೀಯ ರಾಷ್ಟ್ರೀಯ ಲೋಕದಳ(ಐಎನ್‌ಎಲ್‌ಡಿ) ಹರಿಯಾಣ ರಾಜ್ಯಾಧ್ಯಕ್ಷ ನಫೆ ಸಿಂಗ್ ರಾಠಿ ಅವರ ಇಬ್ಬರು ಶೂಟರ್‌ಗಳನ್ನು ಪೊಲೀಸರು ಗೋವಾದಿಂದ ಬಂಧಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಬಂಧಿತರ ಹೆಸರು ಸೌರವ್ ಮತ್ತು ಆಶಿಶ್ ಇಬ್ಬರೂ ದೆಹಲಿಯ ನಂಗ್ಲೋಯ್ ಪ್ರದೇಶದ ನಿವಾಸಿಗಳು ಎನ್ನಲಾಗಿದೆ. ಶೂಟರ್‌ಗಳು ಕಪಿಲ್ ಸಾಂಗ್ವಾನ್ ಅಲಿಯಾಸ್ ನಂದು ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ. ಝಜ್ಜರ್ ಪೊಲೀಸರು, ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಎಸ್‌ಟಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಶೂಟರ್‌ಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಫೆಬ್ರವರಿ ೨೫ರಂದು ನಫೆ ಸಿಂಗ್ ರಾಠಿ ಫಾರ್ಚೂನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಬರಾಹಿ ಗೇಟ್ ಬಳಿ ಬಂದಾಗ ಐ-೧೦ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾಜಿ ಶಾಸಕರ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಕೋರರು ೪೦ರಿಂದ ೫೦ ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ನಫೆ ಸಿಂಗ್ ಅವರಲ್ಲದೆ, ಅವರ ಭದ್ರತಾ ಸಿಬ್ಬಂದಿ ಜೈ ಕಿಶನ್ ಸಾವನ್ನಪ್ಪಿದ್ದಾರೆ. ಲಂಡನ್ ಮೂಲದ ದರೋಡೆಕೋರ ಕಪಿಲ್ ಸಾಂಗ್ವಾನ್ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.
ಎರಡು ದಿನಗಳ ಹಿಂದೆ ಜಜ್ಜರ್ ಪೊಲೀಸರು ನಫೆ ಸಿಂಗ್ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ತಲಾ ೧ ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಆರೋಪಿಗಳನ್ನು ಆಶಿಶ್, ನಕುಲ್ ಸಂಗ್ವಾನ್ ಅಲಿಯಾಸ್ ದೀಪಕ್ ಸಾಂಗ್ವಾನ್ ಮತ್ತು ಅತುಲ್ ಎಂದು ಗುರುತಿಸಲಾಗಿದೆ. ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.