ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಇಲಾಖೆಗೆ ಸಂದಾಯವಾದ ರಾಜಸ್ವವೇ ಗುಳುಂ

01:34 PM Jun 08, 2024 IST | Samyukta Karnataka

ಬೆಂಗಳೂರು: ದೆಹಲಿಯಲ್ಲಿರುವ ಕಾಂಗ್ರೆಸ್‌ನ ಕಲೆಕ್ಷನ್ ಏಜೆಂಟರು ಸದ್ಯದಲ್ಲೇ ನಮ್ಮ ರಾಜ್ಯಕ್ಕೆ ಮತ್ತೆ ಭೇಟಿ ನೀಡುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ ಎಂದು ರಾಜ್ಯ ಬಿಜೆಪಿ ಹೇಳಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರಾಜ್ಯ ಕಂಡ ಅತಿ ಭ್ರಷ್ಟ ಸರ್ಕಾರವಾದ ಸಿದ್ದರಾಮಯ್ಯ ನೇತೃತ್ವದ ‌ಕರ್ನಾಟಕ ಕಾಂಗ್ರೆಸ್‌ ಸರ್ಕಾರದಲ್ಲಿ ಕಲೆಕ್ಷನ್‌ ಕಲೆ ಮಿತಿಮೀರಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಜನ ಕಂದಾಯ ಇಲಾಖೆಗೆ ಕಟ್ಟುವ ಹಣವೆಲ್ಲಾ ಸಿಬ್ಬಂದಿಗಳ ಖಾಸಗಿ ಖಾತೆಗೆ ಜಮೆ ಆಗುತ್ತಿತ್ತು ಎಂದರೆ ಈ ಸರ್ಕಾರ ಅದಿನ್ನೆಂಥ ಭ್ರಷ್ಟ ಜಾಲವನ್ನು ಹೆಣೆದಿದೆ ಎಂಬುದು ಸ್ಪಷ್ಟವಾಗುತ್ತಿದೆ. ದೆಹಲಿಯಲ್ಲಿರುವ ಕಾಂಗ್ರೆಸ್‌ನ ಕಲೆಕ್ಷನ್ ಏಜೆಂಟರು ಸದ್ಯದಲ್ಲೇ ನಮ್ಮ ರಾಜ್ಯಕ್ಕೆ ಮತ್ತೆ ಭೇಟಿ ನೀಡುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಅಭಿವೃದ್ಧಿ ನಿಗಮಗಳಿಂದ ಸಾವಿರ ಕೋಟಿ ರೂಪಾಯಿ ಖಾಸಗಿ ಬ್ಯಾಂಕ್‌ಗಳಿಗೆ ಜಮೆಯಾದಂತೆ ಕಂದಾಯ ಇಲಾಖೆಗೆ ಸಂದಾಯವಾದ ರಾಜಸ್ವವೇ ಗುಳುಂ ಆಗುತ್ತಿದೆಯಲ್ಲ ಮುಖ್ಯಮಂತ್ರಿಗಳೇ, ಇನ್ನೆಷ್ಟು ಚುನಾವಣೆಗಳಿಗೆ ಹಣ ಕಲೆಕ್ಷನ್ ಮಾಡುವ ಹೊಣೆ ಹೊತ್ತಿದ್ದೀರಿ? ಎಂದಿದೆ.

Next Article