ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಇಲ್ಲದ ಇತಿಹಾಸ ಸೃಷ್ಟಿಸುವುದೇ ಇವರ ಕಾಯಕ...

04:01 PM Sep 30, 2024 IST | Samyukta Karnataka

ನಿಮ್ಮ ಓಲಾಟಗಳನ್ನು ಇತರೆ ಧರ್ಮಗಳ ಹಬ್ಬಗಳಲ್ಲೂ ಪ್ರದರ್ಶಿಸಿ ನಿಮ್ಮ ನಾಟಕವನ್ನು ಯಶಸ್ವೀ ಗೊಳಿಸಿ

ಬೆಂಗಳೂರು: ನಕಾರಾತ್ಮಕ ಶಕ್ತಿಗಳನ್ನು ವೈಭವೀಕರಿಸಿ ಮಾಲಾರ್ಪಣೆ ಮಾಡುವುದೇ ಇವರ ಕಾಯಕವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಮಹಿಷ ದಸರಾ ಆಚರಿಸುತ್ತೇವೆಂದು ಹೆಣಗಾಡುತ್ತಿರುವ ಸದಾ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚಲಿತದಲ್ಲಿರುವ ಪ್ರೊ.ಭಗವಾನ್ ಅವರು ಜಂಬೂ ಸವಾರಿ ತಡೆಯುತ್ತೇನೆ ಎಂದು ಹೇಳಿದ್ದಾರೆ. ಹಿಂದೂಗಳ ಭವ್ಯ ಪರಂಪರೆಯನ್ನು ನಾಶ ಮಾಡುವುದು, ತಪ್ಪು ಮಾಹಿತಿ ನೀಡುವುದು, ಇಲ್ಲದ ಇತಿಹಾಸ ಸೃಷ್ಟಿಸುವುದು, ನಕಾರಾತ್ಮಕ ಶಕ್ತಿಗಳನ್ನು ವೈಭವೀಕರಿಸಿ ಮಾಲಾರ್ಪಣೆ ಮಾಡುವುದೇ ಇವರ ಕಾಯಕವಾಗಿದೆ. ಚಿತ್ತಸ್ವಾಸ್ಥ್ಯ ಕಳೆದುಕೊಂಡಿರುವ ಎಡಚರ ವಿಚಾರವ್ಯಾಧಿಗಳು ಮಹಿಷನ ಆಚರಣೆಯನ್ನು ತಮ್ಮ ಮನೆಯಲ್ಲಿ ಮಾಡಿಕೊಳ್ಳಲಿ. ನಮ್ಮ ಆಚರಣೆ, ಹಬ್ಬ, ಸಂಸ್ಕೃತಿಗಳಿಗೆ ಅಡ್ಡಿ ಬರುವುದಕ್ಕೆ ಅವರಿಗೆ ಯಾವುದೇ ಹಕ್ಕಿಲ್ಲ. ಇವರ ಜಾತ್ಯತೀತ ಹೋರಾಟ ಕೇವಲ ಹಿಂದೂ ಹಬ್ಬಗಳಿಗೆ ಮೀಸಲಾಗಿರುವುದು ಇನ್ನೊಂದು ಸೋಜಿಗದ ಸಂಗತಿ. ನಿಮ್ಮ ಓಲಾಟಗಳನ್ನು ಇತರೆ ಧರ್ಮಗಳ ಹಬ್ಬಗಳಲ್ಲೂ ಪ್ರದರ್ಶಿಸಿ ನಿಮ್ಮ ನಾಟಕವನ್ನು ಯಶಸ್ವೀ ಗೊಳಿಸಿ. ಹಿಂದೂ ಹಬ್ಬಗಳು ಬಂದರೆ ನಿಮ್ಮ ಪರಿಸರದ ಕಾಳಜಿ, ಮಹಿಷನ ಕಥೆಗಳು, ಮೌಢ್ಯದ ಭಾವನೆಗಳು ಹಿಂದೂ ಹಬ್ಬಗಳಿಗೆ, ಆಚರಣೆಗಳಿಗೆ ಸೀಮಿತವಾಗದಿರಲಿ. ಪ್ರೊ.ಭಗವಾನ್ ಹಾಗೂ ಇವರ ಮಹಿಷಾಸುರ ನಾಟಕ ಮಿತ್ರ ಮಂಡಳಿಗೆ ನಿಜವಾಗಲೂ ತಾಕತ್ತಿದ್ದರೆ ಜಂಬೂ ಸವಾರಿಯನ್ನು ನಿಲ್ಲಿಸುವ ಪ್ರಯತ್ನ ಮಾಡಲಿ ನೋಡೋಣ ಎಂದಿದ್ದಾರೆ.

Tags :
#ದಸರಾ#ಮೈಸೂರು#ಯತ್ನಾಳ್‌
Next Article