ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಈ ಬಾರಿ ಸ್ಪರ್ಧೆ ಮಾಡಿಯೇ ಸಿದ್ಧ

10:26 PM Mar 21, 2024 IST | Samyukta Karnataka

ಶಿವಮೊಗ್ಗ: ನಾನು ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿಯೇ ಶತಃಸಿದ್ಧ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಬಿಜೆಪಿ ಬಂಡಾಯಗಾರ ಕೆ.ಎಸ್. ಈಶ್ವರಪ್ಪ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರದಲ್ಲಿ ಹೆಚ್ಚು ಲೀಡ್ ಪಡೆಯುತ್ತೇನೆ. ಇತರೆ ಕಡೆಗಳಲ್ಲಿ ಲೀಡ್ ಪಡೆಯಲು ಶ್ರಮಿಸುತ್ತೇನೆ. ಪಕ್ಷ ಶುದ್ಧೀಕರಣ ಮಾಡಬೇಕು ಎಂಬ ಸದಾನಂದಗೌಡ ಅವರ ಹೇಳಿಕೆಗೆ ನನ್ನ ಸಹಮತ ಇದೆ. ಪಕ್ಷವನ್ನು ಅಪ್ಪ-ಮಕ್ಕಳ ಹಿಡಿತದಿಂದ ತಪ್ಪಿಸಬೇಕಿದೆ ಎಂದರು.
ನನ್ನ ನಿವಾಸದಲ್ಲೇ ಇದೇ ೨೮ರಂದು ಚುನಾವಣಾ ಕಾರ್ಯಾಲಯ ಉದ್ಘಾಟನೆಯಾಗಲಿದೆ. ಕೆಲವು ಪ್ರಮುಖರನ್ನು ಆಹ್ವಾನಿಸಿದ್ದೇನೆ. ಅವರು ಬರುವ ನಿರೀಕ್ಷೆ ಇದೆ. ಪ್ರಮುಖರು ಬರದಿದ್ದರೆ ಮಹಿಳೆಯರಿಂದ ಉದ್ಘಾಟನೆ ಮಾಡಿಸುತ್ತೇನೆಂದರು.
ಕಾರ್ಯಕರ್ತರಿಗೆ ಆತಂಕವಿತ್ತು. ಮೋದಿ ಅವರ ಒಂದು ಫೋನ್‌ಗೆ ಈಶ್ವರಪ್ಪ ಅಖಾಡದಿಂದ ಹಿಂದೆ ಸರಿಯುತ್ತಾರೆ ಎಂಬ ಹೆದರಿಕೆ ಇತ್ತು. ಆದರೆ ಕಾರ್ಯಕರ್ತರಿಗೆ ಅಪಮಾನ ಆಗಲು ಯಾವತ್ತೂ ಬಿಡುವುದಿಲ್ಲ. ನೂರಕ್ಕೆ ನೂರು ನನ್ನ ಸ್ಪರ್ಧೆ ಖಚಿತ ಎಂದರು.

Next Article