For the best experience, open
https://m.samyuktakarnataka.in
on your mobile browser.

ಊರಿಗೆ ಊಟ ಹಾಕಿದ ಅಜ್ಜಿಗೆ ನನ್ಯಾಕ್‌ ಕರಿಲಿಲ್ಲ ಎಂದ ಹೆಬ್ಬಾಳ್ಕರ್

06:24 PM Aug 25, 2024 IST | Samyukta Karnataka
ಊರಿಗೆ ಊಟ ಹಾಕಿದ ಅಜ್ಜಿಗೆ ನನ್ಯಾಕ್‌ ಕರಿಲಿಲ್ಲ ಎಂದ ಹೆಬ್ಬಾಳ್ಕರ್

ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯಲ್ಲಿ ತನಗೆ ಬಂದ ಹಣದಲ್ಲಿ ಇಡೀ ಊರಿಗೆ ಹೋಳಿಗೆ ಊಟ ಹಾಕಿದ ಅಜ್ಜಿಗೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಬೆಳಗಾವಿ‌ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎನ್ನುವವರು ತಮ್ಮ ಖಾತೆಗೆ ಜಮೆಯಾಗಿದ್ದ ಗೃಹಲಕ್ಷ್ಮಿ ಹಣ ಕೂಡಿಟ್ಟು ಸಿದ್ದರಾಮಯ್ಯನವರ ಶ್ರೇಯಸ್ಸಿಗಾಗಿ ಊರಿಗೆಲ್ಲ ಹೋಳಿಗೆ ಊಟ ಹಾಕಿದ್ದಾರೆ. ಇದನ್ನು ಗಮನಿಸಿದ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್‌ ಅಜ್ಜಿಗೆ ಕರೆ ಮಾಡಿ ಮಾತನಾಡಿದ್ದಾರೆ. "ಊರಿಗೆಲ್ಲಾ ಊಟ ಹಾಕಿ, ಮಗಳನ್ನ ಕರಿಯೋದಿಲ್ಲೇನು. ನಾನೇ ನಿನ್ನ ಮಗಳು ಅದಕ್ ಸೀರೆ ಕಳಸೇನಿ. ನಿಮ್ಮ ಆಶೀರ್ವಾದ ನಮ್ಮ ಮ್ಯಾಲ ಇರ್ಲಿ. ಮನೆಗೆ ಬರತೇನಿ." ಎಂದು ಬೆಳಗಾವಿ ಭಾಷೆಯಲ್ಲಿಯೇ ಮಾತನಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Tags :