For the best experience, open
https://m.samyuktakarnataka.in
on your mobile browser.

ಎಲ್ಲರನ್ನು ಬಡವರನ್ನಾಗಿ ಮಾಡುವುದು ರಾಹುಲ್ ಸಮಾನತೆ

06:12 PM Apr 08, 2024 IST | Samyukta Karnataka
ಎಲ್ಲರನ್ನು ಬಡವರನ್ನಾಗಿ ಮಾಡುವುದು ರಾಹುಲ್ ಸಮಾನತೆ

ಗದಗ: ಎಲ್ಲರನ್ನು ಬಡವರನ್ನಾಗಿ ಮಾಡಿ ಸಮಾನತೆ ತರುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತತ್ವವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಲಕ್ಷ್ಮೇಶ್ವರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಪ್ರಚಾರದಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಎಲ್ಲಾ ವರ್ಗದ ಜನರು ಬಹಿರಂಗವಾಗಿ ಬಂದು ಬೆಂಬಲ‌ ಸೂಚಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ನಮಗೆ ಬೆಂಬಲ ಹೆಚ್ಚಾಗುತ್ತಿದೆ. ಜನರು ಸಹ ತೀರ್ಮಾನ ಮಾಡಿದ್ದಾರೆ ಅನಿಸುತ್ತದೆ. ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸ ನನಗಿದೆ ಎಂದರು.
ಆರ್ಥಿಕ ಸಮೀಕ್ಷೆ ನಡೆಸಿ ಸಮಾನತೆ ತರುವ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು. ಎರಡು ತರನಾದ ಸಮಾನತೆ ಇರುತ್ತದೆ. ಒಂದು ಬಡವರನ್ನು ಶ್ರೀಮಂತರನ್ನಾಗಿ ಮಾಡಿ ಸಮಾನತೆ ಮಾಡುವುದು. ಇನ್ನೊಂದು ಎಲ್ಲರನ್ನೂ ಬಡವರನ್ನಾಗಿ ಮಾಡುವ ಸಮಾನತೆ. ರಾಹುಲ್‌ ಗಾಂಧಿ ಎಲ್ಲರನ್ನೂ ಬಡವರನ್ನಾಗಿ ಮಾಡುವ ಸಮಾನತೆ ತತ್ವ ಹೊಂದಿದ್ದಾರೆ. ಅವರು ಹತಾಶರಾಗಿ ಅಸಂಬದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.