For the best experience, open
https://m.samyuktakarnataka.in
on your mobile browser.

ಐಟಿ ಅಧಿಕಾರಿಗಳ ದಾಳಿ

08:44 PM Jan 23, 2024 IST | Samyukta Karnataka
ಐಟಿ ಅಧಿಕಾರಿಗಳ ದಾಳಿ

ಕೊಪ್ಪಳ: ನಗರದ ಕೆಜಿಪಿ ಗೋಲ್ಡ್‌ ಜ್ಯುವಲೆರ್ಸ್ ಮತ್ತು ಸಿಲ್ಕ್ ಆ್ಯಂಡ್ ಸಾರೀಸ್ ಅಂಗಡಿ ಮೇಲೆ ಮಂಗಳವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ಕಡತ ಪರಿಶೀಲನೆ ಮಾಡಿದ್ದಾರೆ.
ಹುಬ್ಬಳ್ಳಿ ಮೂಲದ ಉದ್ಯಮಿಗೆ ಸೇರಿದ ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿಯ ಕೆಜಿಪಿ ಅಂಗಡಿಗೆ ಸುಮಾರು ೮ಕ್ಕೂ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳ ತಂಡವು ಶೋಧನೆ ನಡೆಸಿದ್ದಾರೆ.
ಮಂಗಳವಾರ ಬೆಳಿಗ್ಗೆ 10.30ಕ್ಕೆ ಆರಂಭವಾದ ಕಡತ ಪರಿಶೀಲನಾ ಕಾರ್ಯ ಮಧ್ಯಾಹ್ನ 3ಗಂಟೆಯವರೆಗೂ ನಡೆದಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದರು. ಐಟಿ ದಾಳಿ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.