For the best experience, open
https://m.samyuktakarnataka.in
on your mobile browser.

ಐವರು ರೌಡಿಗಳ ಗಡಿ ಪಾರಿಗೆ ಆದೇಶ

03:56 PM Jan 23, 2024 IST | Samyukta Karnataka
ಐವರು ರೌಡಿಗಳ ಗಡಿ ಪಾರಿಗೆ ಆದೇಶ

ಬೀದರ್ : ಬೀದರ ಜಿಲ್ಲೆಯಲ್ಲಿ ಸಮಾಜ ವಿರೋಧಿ ಹಾಗೂ ಅಕ್ರಮ ಕಾನೂನು ಬಾಹಿರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ತೊಡಕಾಗಿದ್ದ 5 ಜನ ರೌಡಿಗಳನ್ನು ಗಡಿಪಾರು ಮಾಡಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಬೀದರ್ ಜಿಲ್ಲೆಯ ಬೀದರ್ ನಗರ ಮತ್ತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಮತ್ತು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ದಕ್ಕೆ ತರುವ 5 ಜನ ಸಮಾಜ ಘಾತಕರಿಗೆ ವಿಜಯಪುರ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ 6 ತಿಂಗಳವರೆಗೆ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಬೀದರ್ ರವರು ನೀಡಿದ ಪ್ರಸ್ತಾವನೆ ಮೇರೆಗೆ ಜಿಲ್ಲಾಧಿಕಾರಿಗಳು ಗಡಿಪಾರು ಆದೇಶ ಮಾಡಿದ್ದಾರೆ.
ಗಡಿಪಾರು ಆದ ವ್ಯಕ್ತಿಗಳಿಗೆ 6 ತಿಂಗಳ ವರೆಗೆ ಜಿಲ್ಲೆ ಪ್ರವೇಶ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿ ಹಾಗೂ ಗಡಿ ಪಾರಾದ ಜಿಲ್ಲೆಯಲ್ಲೂ ಇವರ ಮೇಲೆ ನಿಗಾ ವಹಿಸಲಾಗುವುದು.. ಕಳುಹಿಸಿ ಕೊಟ್ಟ ಜಿಲ್ಲೆಯಲ್ಲಿ ಉತ್ತಮ ವರ್ತನೆ ತೋರಿದಲ್ಲಿ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಬೀದರ್ ಜಿಲ್ಲಾ ಪೊಲೀಸ್ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸುವುದು ಮತ್ತು ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.