For the best experience, open
https://m.samyuktakarnataka.in
on your mobile browser.

ಐವರ ಅಸ್ಥಿಪಂಜರ ಪತ್ತೆ ಪ್ರಕರಣ: ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ

10:52 PM May 16, 2024 IST | Samyukta Karnataka
ಐವರ ಅಸ್ಥಿಪಂಜರ ಪತ್ತೆ ಪ್ರಕರಣ  ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ

ಚಿತ್ರದುರ್ಗ: ಇಡೀ ರಾಜ್ಯವನ್ನು ತಲ್ಲಣಗೊಳಿಸಿದ ಐವರ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಅತಿಯಾಗಿ ನಿದ್ರೆ ಮಾತ್ರೆ ಸೇವಿಸಿ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವೈದ್ಯರು ಅಂತಿಮ ವರದಿ ಸಲ್ಲಿಸಿದ್ದಾರೆ.
ನಗರದ ಹೊರವಲಯದ ಚಳ್ಳಕೆರೆ ಗೇಟ್ ಸಮೀಪದ ಮನೆಯೊಂದರಲ್ಲಿ ೨೦೨೩ರ ಡಿ. ೨೮ರಂದು ಐವರ ಅಸ್ಥಿಪಂಜರ ಪತ್ತೆಯಾಗಿತ್ತು. ಎಫ್‌ಎಸ್‌ಎಲ್ ಮತ್ತು ವೈದ್ಯರ ಅಂತಿಮ ವರದಿ ಬಂದಿದ್ದು ಐವರು ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ಅತಿಯಾದ ಆರೋಗ್ಯ ಸಮಸ್ಯೆ, ಹದಗೆಟ್ಟ ಹಣಕಾಸು ಪರಿಸ್ಥಿತಿಯಿಂದ ನೊಂದು ಇವರು ನಿದ್ರೆ ಮಾತ್ರೆ ಸೇವಿಸಿದ್ದಾರೆ. ಆದರೆ ತನಿಖೆ ವೇಳೆಯಲ್ಲಿ ಮನೆಯಲ್ಲಿನ ಎರಡು ಪಾತ್ರೆಯಲ್ಲಿ ಸೈನೆಡ್ ಅಂಶ ಇರುವುದು ಪತ್ತೆಯಾಗಿತ್ತು. ಐವರ ಅಸ್ಥಿಪಂಜರದಲ್ಲಿ ಸೈನಡ್ ಪತ್ತೆಯಾಗಿಲ್ಲ. ನಿದ್ರೆ ಮಾತ್ರೆಯಿಂದಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್‌ಕುಮಾರ್ ಮೀನಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.