For the best experience, open
https://m.samyuktakarnataka.in
on your mobile browser.

ಒಂದೇ ಜಿಲ್ಲೆಯ ಮೂವರು ರಾಜ್ಯಕ್ಕೆ ದ್ವಿತೀಯ

12:00 PM May 09, 2024 IST | Samyukta Karnataka
ಒಂದೇ ಜಿಲ್ಲೆಯ ಮೂವರು ರಾಜ್ಯಕ್ಕೆ ದ್ವಿತೀಯ

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬಾಗಲಕೋಟೆಯ ವಿದ್ಯಾರ್ಥಿನಿ ಅಂಕಿತಾಗೆ ಮೊದಲ ಸ್ಥಾನ ದೊರೆತಿದೆ. ಆದರೆ, ದ್ವಿತೀಯ ಸ್ಥಾನದಲ್ಲಿ ರಾಜ್ಯದ ಏಳು ವಿದ್ಯಾರ್ಥಿಗಳು ಸ್ಥಾನ ಪಡೆದರೆ, ಒಂದೇ ಜಿಲ್ಲೆಯ ಮೂವರು ಅದರಲ್ಲಿರುವುದು ಈ ಬಾರಿಯ ವಿಶೇಷ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮೂವರು ವಿದ್ಯಾರ್ಥಿಗಳಾದ ದರ್ಶನ, ಚಿನ್ಮಯ ಮತ್ತು ಸಿದ್ದಾಂತ ಮೂವರು 625ಕ್ಕೆ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.