For the best experience, open
https://m.samyuktakarnataka.in
on your mobile browser.

ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ

11:11 PM Apr 16, 2024 IST | Samyukta Karnataka
ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಜಿಲ್ಲಾ ಚುನಾವಣಾ ಕಚೇರಿಗೆ ಓಡುತ್ತ ಬಂದು ನಾಮಪತ್ರ ಸಲ್ಲಿಸಿದ್ದಾರೆ.
ಮಧ್ಯಾಹ್ನ ೩ ಗಂಟೆವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಮೆರವಣಿಗೆ ಕೋರ್ಟ್ ವೃತ್ತಕ್ಕೆ ಬರುವುದು ತಡವಾಗಿದೆ. ಭದ್ರತೆಗೆ ನೇಮಿಸಿದ್ದ ಪೊಲೀಸ್ ಸಿಬ್ಬಂದಿ ಅಭ್ಯರ್ಥಿ ವಿನೋದ ಅಸೂಟಿ ಅವರನ್ನು ಒಳಗೆ ಬಿಡಲು ಒಪ್ಪಲಿಲ್ಲ. ಮೊದಲೇ ತಡವಾಗಿದ್ದರಿಂದ ಸ್ಥಳಿಯ ಪೊಲೀಸ್ ಅಧಿಕಾರಿಯನ್ನು ಕರೆದು ಅಭ್ಯರ್ಥಿ ಹಾಗೂ ಸೂಚಕರನ್ನು ಬಿಡುವಂತೆ ತಿಳಿಸಲಾಯಿತು. ಮಧ್ಯಾಹ್ನ ೨:೫೦ಕ್ಕೆ ಜಿಲ್ಲಾ ಚುನಾವಣಾ ಕಚೇರಿ ಆವರಣಕ್ಕೆ ಸೂಚಕರೊಂದಿಗೆ ಓಡುತ್ತ ಬಂದರು. ೩ ಗಂಟೆಗೆ ೫ ನಿಮಿಷಗಳಿರುವಾಗ ಕಚೇರಿ ಆವರಣ ತಲುಪಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುಂಚೆ ಪಕ್ಷದ ಮುಖಂಡರೊಂದಿಗೆ ಮೂರು ಪ್ರತಿ ನಾಮಪತ್ರ ಸಲ್ಲಿಸಿದ್ದರು. ಅವರು ಮೆರವಣಿಗೆಯೊಂದಿಗೆ ಬಂದು ೪ನೇ ಪ್ರತಿ ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಅವರಿಗೆ ಸಲ್ಲಿಸಿದರು.