For the best experience, open
https://m.samyuktakarnataka.in
on your mobile browser.

ಕಂಬಳ ಕೇವಲ ಕ್ರೀಡೆಯಲ್ಲ...

01:42 PM Feb 17, 2024 IST | Samyukta Karnataka
ಕಂಬಳ ಕೇವಲ ಕ್ರೀಡೆಯಲ್ಲ

ಮಂಗಳೂರು: ಕಂಬಳ ಅನ್ನೋದು ಕೇವಲ ಕ್ರೀಡೆಯಾಗಿ ಮಾತ್ರ ಇರದೇ, ತುಳುನಾಡಿನ ಕೃಷಿ ಬದುಕು ಮತ್ತು ಐತಿಹಾಸಿಕ ಪರಂಪರೆಯ ಹಿನ್ನೆಲೆಯನ್ನು ಹೊಂದಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಮಂಗಳೂರಿನ ವಾಮಂಜೂರಿನಲ್ಲಿ ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳ ಟ್ರಸ್ಟ್ ವತಿಯಿಂದ ಇಂದು ಹಮ್ಮಿಕೊಂಡಿದ್ದ 12ನೇ ವರ್ಷದ ತಿರುವೈಲೋತ್ಸವ ಹಾಗೂ ಜೋಡುಕರೆ ಕಂಬಳ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಕೆಲ ಚಿತ್ರಗಳನ್ನು ಹಂಚಿಕೊಂಡು ಕಂಬಳ ಅನ್ನೋದು ಕೇವಲ ಕ್ರೀಡೆಯಾಗಿ ಮಾತ್ರ ಇರದೇ, ತುಳುನಾಡಿನ ಕೃಷಿ ಬದುಕು ಮತ್ತು ಐತಿಹಾಸಿಕ ಪರಂಪರೆಯ ಹಿನ್ನೆಲೆಯನ್ನು ಹೊಂದಿದೆ. ಸರ್ವ ಜನಾಂಗದ ಶಾಂತಿಯ ತೋಟದಂತಿರುವ ತುಳುನಾಡು ಕರ್ನಾಟಕದ ಹೆಗ್ಗಳಿಕೆ. ಇಂದು ಕಂಬಳ ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲರಿಗೂ ಶುಭ ಕೋರುತ್ತಾ, ನಮ್ಮ ಸರ್ಕಾರ ಕಂಬಳಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.