For the best experience, open
https://m.samyuktakarnataka.in
on your mobile browser.

ಕರಡಿಗಳ ದಾಳಿ: ವ್ಯಕ್ತಿಗೆ ಗಂಭೀರ ಗಾಯ

07:41 PM Nov 27, 2023 IST | Samyukta Karnataka
ಕರಡಿಗಳ ದಾಳಿ  ವ್ಯಕ್ತಿಗೆ ಗಂಭೀರ ಗಾಯ

ಕೊಪ್ಪಳ: ತಾಲೂಕಿನ ಇರಕಲ್‌ಗಡಾ ಬಳಿ ಕರಡಿಗಳು ದಾಳಿ ಮಾಡಿ, ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ಗಾಯಾಳುವನ್ನು ತಾಲೂಕಿನ ಹೊಸುರು ಗ್ರಾಮದ ಈರಣ್ಣ ಜಾಲಿಗಿಡದ ಎಂದು ಗುರುತಿಸಲಾಗಿದೆ.
ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಹುಣ್ಣಿಮೆಯ ನಿಮಿತ್ತ ಸೋಮವಾರ ಪಾದಯಾತ್ರೆಯ ಮೂಲಕ ತಲುಪಬೇಕು ಎಂದು ಯೋಚಿಸಿದ್ದು, ಅದರಂತೆ ಭಾನುವಾರ ಭಕ್ತ ಈರಣ್ಣ ಜಾಲಿಗಿಡದ ಪಾದಯಾತ್ರೆ ಆರಂಭಿಸಿದರು.
ಸಂಜೆ ಮನಸ್ಸು ಬದಲಾಯಿಸಿ ಮರಳಿ ಕೊಪ್ಪಳಕ್ಕೆ ಪ್ರಯಾಣ ಬೆಳೆಸಿದ್ದರು. ತಾಲೂಕಿನ ಇರಕಲ್‌ಗಡಾ ಸಮೀಪ ನಾಲ್ಕು ಕರಡಿಗಳು ಏಕಕಾಲಕ್ಕೆ ದಾಳಿ ಮಾಡಿದ್ದು, ಈರಣ್ಣನ ತಲೆ ಮತ್ತು ಮುಖಕ್ಕೆ ಉಗುರುಗಳಿಂದ ಪರಚಿವೆ. ಅಲ್ಲದೇ ತಲೆಯ ಚರ್ಮ ಸಮೇತ ಹೊರಬರುವಂತೆ ಕಚ್ಚಿವೆ. ಇದರಿಂದಾಗಿ ತಲೆ ಮತ್ತು ಮುಖವು ರಕ್ತಸಿಕ್ತವಾಗಿತ್ತು. ಬಳಿಕ ಈರಣ್ಣನನ್ನು ಚಿಕಿತ್ಸೆಗಾಗಿ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.