For the best experience, open
https://m.samyuktakarnataka.in
on your mobile browser.

ಕಾಂಗ್ರೆಸ್ ಅಧಿಕಾರ ದರ್ಪ: ಬಿ.ವೈ ವಿಜಯೇಂದ್ರ ಆರೋಪ

01:08 PM Jan 28, 2024 IST | Samyukta Karnataka
ಕಾಂಗ್ರೆಸ್ ಅಧಿಕಾರ ದರ್ಪ  ಬಿ ವೈ ವಿಜಯೇಂದ್ರ ಆರೋಪ

ರಾಯಚೂರು: ಕೆರಗೋಡು ಹನುಮಧ್ವಜ ತೆರವು ಮಾಡಿದ್ದಾರೆ.ಕಾಂಗ್ರೆಸ್ ಸರ್ಕಾರ ಅಧಿಕಾರದ ದರ್ಪ ನೆತ್ತಿಗೇರಿಸಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕಾನೂಮು ಸುವ್ಯವಸ್ಥೆ ಹಾಳು ಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ ಎಂದು ಟೀಕಿಸಿದರು.
ಮಂಡ್ಯ ಗ್ರಾ.ಪಂ ನಲ್ಲಿ ನಿರ್ಣಯ ಮಾಡಿದೆ.
ಆದ್ರೂ ಧ್ವಜ ತೆರವು ಮಾಡಲಾಗಿದೆ.ಜಾಹಿರಾತು ನೀಡಿ ಜನರ ಬಳಿ ಕಾಂಗ್ರೆಸ್ ಕಾಲಹರಣ ಮಾಡುತ್ತಿದೆ ಎಂದು ದೂರಿದರು.
ಸರ್ಕಾರ ಬಂದು ಇಷ್ಟು ವರ್ಷವಾದ್ರೂ ಒಂದೂ ಜನಪರ ಹೊಸ.ಯೋಜನೆ ಮಾಡಿಲ್ಲ ಎಂದು ಆಪಾದಿಸಿದರು.

ಸಿದ್ದರಾಮಯ್ಯ ಅನುಭವಿ ಸಿಎಂ ಅವರು ಮೇಲೆ ಇದ್ದ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಯಾವುದೇ ಹೊಸ ಸರ್ಕಾರ ಬಂದ ಮೇಲೆ ಐದಾರು ತಿಂಗಳು ಸಮಯಾವಕಾಶ ಕೊಡಬೇಕು.ಇಡೀ ದೇಶದಲ್ಲಿ ಹೊಸ ಸರ್ಕಾರ ಬಂದು ಜನಪ್ರಿಯತೆ ಕಳೆದುಕೊಂಡ ಕಾಂಗ್ರೆಸ್ ಸರ್ಕಾರವಾಗಿದೆ ಎಂದು ತಿಳಿಸಿದರು.
ಶಾಲಾ ಮಕ್ಕಳಿಗೆ ಶಾಲೆಗೆ ಹೋಗಲು ಬಸ್ ಅನುಕೂಲವಾಗುತ್ತಿಲ್ಲ.
ಕೆಎಸ್ಆರ್ಟಿಸಿ ಸಿಬ್ಬಂದಿ ಗೆ ಸಂಬಳ‌ ನೀಡಲು ಹಣವಿಲ್ಲ ಎಂದು ದೂರಿದರು.

.