For the best experience, open
https://m.samyuktakarnataka.in
on your mobile browser.

ಕಾಗೇರಿ ಭೇಟಿಯಾದ ಶಾಸಕ ಹೆಬ್ಬಾರ್

09:49 PM Aug 19, 2023 IST | Samyukta Karnataka
ಕಾಗೇರಿ ಭೇಟಿಯಾದ ಶಾಸಕ ಹೆಬ್ಬಾರ್

ಶಿರಸಿ: ಯಲ್ಲಾಪುರ ಶಾಸಕರು ಅನ್ಯ ಕಾರ್ಯನಿಮಿತ್ತ ಶನಿವಾರ ಶಿರಸಿಗೆ ಬಂದಾಗ ನಾನು ಅವರು ಪ್ರಸ್ತುತ ವಿದ್ಯಮಾನಗಳ ಕುರಿತು ಸೌಹಾರ್ಧಯುತವಾಗಿ ಮಾತುಕತೆ ಮಾಡಿದ್ದೇವೆ. ಪ್ರಸಕ್ತವಾದ ಆಗುಹೋಗಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಶನಿವಾರ ಇಲ್ಲಿನ ತಮ್ಮ ಕಚೇರಿಗೆ ಯಲ್ಲಾಪುರ ಶಾಸಕರಾದ ಶಿವರಾಮ ಹೆಬ್ಬಾರ್ ಆಗಮಿಸಿ ಚರ್ಚಿಸಿದ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
ಯಲ್ಲಾಪುರ ಶಾಸಕರಾದ ಶಿವರಾಮ ಹೆಬ್ಬಾರ್ ಸುದ್ದಿಗಾರರಿಗೆ ವಿವರಿಸುತ್ತಾ, ಏನೂ ಸಮಸ್ಯೆ ಇಲ್ಲ. ಎಲ್ಲವೂ ಸರಿಯಾಗಿದೆ. ಯಾವುದೇ ಬದಲಾವಣೆ ಇಲ್ಲ. ಸಣ್ಣಪುಟ್ಟ ಗೊಂದಲಗಳಿಗೆ ಸೂಕ್ತ ಸಮಯದಲ್ಲಿ ಎಲ್ಲವೂ ಸರಿಯಾಗಲಿದೆ. ಶಿರಸಿಯಲ್ಲಿ ಮಾಜಿ ಸಭಾಧ್ಯಕ್ಷರ ಕಾರ್ಯಾಲಯದಲ್ಲಿ ಆಪ್ತ ಸಮಾಲೋಚನೆ ನಡೆಸಿದ್ದು, ಈ ಬಗ್ಗೆ ಗೊಂದಲಗಳಿಲ್ಲ. ಎಲ್ಲವೂ ಸರಿಯಾಗಿದೆ ಎಂದು ಸಂತಸದಿಂದಲೇ ಉತ್ತರಿಸಿ, ತಮ್ಮ ಮುಂದಿನ ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ತೆರಳಿದರು.