For the best experience, open
https://m.samyuktakarnataka.in
on your mobile browser.

ಕಾನೂನು ಪ್ರಕಾರ ಆರೋಪಿಗೆ ಕಠಿಣ ಶಿಕ್ಷೆ: ಕಮೀಶನರ್ ರೇಣುಕಾ ಭರವಸೆ

01:32 PM Apr 19, 2024 IST | Samyukta Karnataka
ಕಾನೂನು ಪ್ರಕಾರ ಆರೋಪಿಗೆ ಕಠಿಣ ಶಿಕ್ಷೆ  ಕಮೀಶನರ್ ರೇಣುಕಾ ಭರವಸೆ

ಹುಬ್ಬಳ್ಳಿ : ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಲು ಎಲ್ಲ ಪ್ರಯತ್ನ ಮಾಡಲಾಗುವುದು. ಧರಣಿ ವಾಪಸ್ ಪಡೆಯಿರಿ ಎಂಬ ಕಮೀಶನರ್ ರೇಣುಕಾ ಸುಕುಮಾರ್ ಮನವಿ ಮೇರೆಗೆ ಎಬಿವಿಪಿ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮನವಿ ಮಾಡಿದರು.
ಆರೋಪಿಗೆ ಕಠಿಣ ಶಿಕ್ಷೆ ಎಂದು ಹೇಳಿದರೆ ಸಾಲದು. ಎನ್ ಕೌಂಟರ್ ಮಾಡಬೇಕು. ಹೀನ ಕೃತ್ಯ ಎಸಗಿದವನಿಗೆ ಕರುಣೆ ತೋರಿಸಬಾರದು. ಮೊದಲು ಅವನನ್ನು ಹೊಡೆದು ಹಾಕಿ ಎಂದು ಧರಣಿ ನಿರತರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮೀಶನರ್ , ನಿಮ್ಮ ಭಾವನೆ ಅರ್ಥವಾಗುತ್ತದೆ.ಕಾನೂನು ಬಿಟ್ಟು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ, ಕಾನೂನು ಮಿತಿಯಲ್ಲಿ ಏನು ಕಠಿಣ ಶಿಕ್ಷೆಯಾಗಬೇಕೊ ಅದನ್ನು ಆಗಿಸಲು ಪ್ರಯತ್ನ ಮಾಡಲಾಗುವುದು. ಗೃಹ ಸಚಿವರೊಂದಿಗೂ ಈ ಕುರಿತು ಮಾಹಿತಿ ನೀಡಿ ಆದೇಶದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕಮೀಶನರ್ ಭರವಸೆ ಬಳಿಕ ಧರಣಿಯನ್ನು ಎಬಿವಿಪಿ ವಾಪಸ್ ಪಡೆಯಿತು.

ಎರಡು ತಾಸು ಹು- ಧಾ ಮುಖ್ಯ ರಸ್ತೆ ಬಂದ್: ಬಿವಿಬಿ ಕಾಲೇಜಿನ ಮುಂದಿನ ಹು- ಧಾ ಮುಖ್ಯ ರಸ್ತೆಯಲ್ಲಿಯೇ ಎಬಿವಿಪಿ ಪ್ರತಿಭಟನೆ ನಡೆಸಿದ್ದರಿಂದ ಈ ಮಾರ್ಗದಲ್ಲಿ ಸುಮಾರು ಎರಡು ತಾಸು ವಾಹನ ಸಂಚಾರ್ ಬಂದ್ ಆಗಿತ್ತು.
ಬೇರೆ ಮಾರ್ಗಗಳ ಮೂಲಕ ವಾಹನ ಸಂಚಾರಕ್ಕೆ ಪೊಲೀಸರು ವ್ಯವಸ್ಥೆ ಮಾಡಿದ್ದರು.

ಸಂಘಟನೆಗಳಿಂದ ಧರಣಿ : ನೇಹಾ ಹತ್ಯೆ ಖಂಡಿಸಿ ಹಿಂದೂ ಜಾಗರಣ ಸಮಿತಿ, ಕರ್ನಾಟಕ ದಲಿತ ವಿಮೋಚನಾ ಸಮಿತಿ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬಿವಿಬಿ ಕಾಲೇಜಿನ ಮುಂದೆ ಧರಣಿ ನಡೆಸಿದರು.
ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಹಿಂದೂ ಜಾಗರಣ ಸಮಿತಿ ಆಗ್ರಹಿಸಿತು.