For the best experience, open
https://m.samyuktakarnataka.in
on your mobile browser.

ಕಾಪು ಮಾರಿಗುಡಿಯಲ್ಲಿ ಸೂರ್ಯಕುಮಾರ್ ದಂಪತಿ

11:59 AM Jul 09, 2024 IST | Samyukta Karnataka
ಕಾಪು ಮಾರಿಗುಡಿಯಲ್ಲಿ ಸೂರ್ಯಕುಮಾರ್ ದಂಪತಿ

ಉಡುಪಿ: ಭಾರತ ಕ್ರಿಕೆಟ್ ತಂಡದ ಟ್ವೆಂಟಿ20 ವಿಶೇಷ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದಿವೀಶಾ ಶೆಟ್ಟಿ ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸಿದ್ದಾರೆ.
ಈ ವಿಡಿಯೊ ವೈರಲ್​ ಆಗಿದೆ. ಸೋಮವಾರ ಮಂಗಳೂರಿಗೆ ಆಗಮಿಸಿದ್ದ ಸೂರ್ಯ ಮತ್ತು ದಿವೀಶಾ ಶೆಟ್ಟಿ ಜೋಡಿ ಜು.7ರಂದು ಎಂಟನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ‘ಪ್ರಣಾಮ್’ ತಂಡದವರು ದಂಪತಿ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು.