For the best experience, open
https://m.samyuktakarnataka.in
on your mobile browser.

ಕಾರು ಹರಿದು ವ್ಯಕ್ತಿ ಸಾವು

07:24 PM Mar 17, 2024 IST | Samyukta Karnataka
ಕಾರು ಹರಿದು ವ್ಯಕ್ತಿ ಸಾವು

ರಾಣೇಬೆನ್ನೂರ: ಮಲಗಿದ್ದ ವ್ಯಕ್ತಿಯ ಮೇಲೆ ಕಾರು ಹರಿದ ಪರಿಣಾಮ ಆತ ಮೃತಪಟ್ಟ ಘಟನೆ ನಗರದ ಬಳ್ಳೂಳ್ಳಿ ಮಾರುಕಟ್ಟೆಯಲ್ಲಿ ಶನಿವಾರ ನಡೆದಿದೆ.
ನಗರದ ಎಕೆಜಿ ಕಾಲೋನಿಯ ನಿವಾಸಿ ಗೌಸಪೀರ್ ನಜೀರಸಾಬ್ ಟಿಂಕೂರ(೪೫) ಮೃತಪಟ್ಟ ವ್ಯಕ್ತಿ. ಈತನು ಬಳ್ಳೂಳ್ಳಿ ಮಾರುಕಟ್ಟೆಯಲ್ಲಿ ಮಲಗಿರುವ ವೇಳೆ ಬೆಳಗ್ಗೆ ೬ ಗಂಟೆಯ ಸಮಯದಲ್ಲಿ ತಾಲೂಕಿನ ಬೆನಕನಕೊಂಡದ ಗ್ರಾಮದ ವಿಶ್ವನಾಥ ಆನ್ವೇರಿ ಎಂಬುವರು ಮಲಗಿರುವ ವ್ಯಕ್ತಿಯನ್ನು ಗಮನಿಸದೇ ಕಾರು ಚಲಾಯಿಸಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.