For the best experience, open
https://m.samyuktakarnataka.in
on your mobile browser.

ಕಾರ್ಯಕರ್ತರಿಂದ ಬಿಜೆಪಿ‌ ಕಚೇರಿ ಮೇಲೆ ದಾಳಿ: ಸಂಗಣ್ಣಗೆ ಟಿಕೆಟ್ ತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ

05:18 PM Mar 14, 2024 IST | Samyukta Karnataka
ಕಾರ್ಯಕರ್ತರಿಂದ ಬಿಜೆಪಿ‌ ಕಚೇರಿ ಮೇಲೆ ದಾಳಿ  ಸಂಗಣ್ಣಗೆ ಟಿಕೆಟ್ ತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ

ಕೊಪ್ಪಳ: ಹಾಲಿ‌ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ತಪ್ಪಿದ್ದು, ಗುರುವಾರ ಸಂಗಣ್ಣ ಕರಡಿ ಬೆಂಬಲಿಗರು ಮತ್ತು ಕಾರ್ಯಕರ್ತರು ನಗರದ ಬಿಜೆಪಿ ಕಾರ್ಯಾಲಯದ ಮೇಲೆ ದಾಳಿ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಸಂಗಣ್ಣ ಕರಡಿಯವರ ಆಶೀರ್ವಾದ ಪಡೆಯಲು ಸಂಸದರ ನಿವಾಸಕ್ಕೆ ಆಗಮಿಸಿದ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ ಮತ್ತು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್ ತಡೆದರು. ಅವರ ಮತ್ತು ಬಿಜೆಪಿ ಪಕ್ಷದ ವಿರುದ್ಧ ಘೋಷಣೆ ಕೂಗಿದರು. ಇದರಿಂದಾಗಿ ಸಂಗಣ್ಣರನ್ನು ಭೇಟಿಯಾಗದೇ ಬಿಜೆಪಿ ಜಿಲ್ಲಾ ಕಾರ್ಯಾಲಯಕ್ಕೆ ತೆರಳಿದರು.

ಮಾಧ್ಯಮದವರೊಂದಿಗೆ ಕಾರ್ಯಾಲಯದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಮತ್ತು ವಿಧಾನಸಭೆಯ ವಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್ ಮಾತನಾಡುವಾಗ ಸಂಸದ ಸಂಗಣ್ಣ ಕರಡಿಯವರ ನಿವಾಸದಿಂದ ಆಗಮಿಸಿದ ಅವರ ಬೆಂಬಲಿಗರು ಮತ್ತು ಕಾರ್ಯಕರ್ತರು ಬಿಜೆಪಿ ಕಾರ್ಯಾಲಯದ ಮೇಲೆ ಕಿಟಕಿಯ ಗಾಜು ಹೊಡೆದು, ಪೀಠೋಪಕರಣಗಳನ್ನು ಧ್ವಂಸ ಗೊಳಿಸಿದರು. ಅಲ್ಲದೇ ಮಾಧ್ಯಮ ಕೇಂದ್ರದ ಬಾಗಿಲನ್ನು ಬಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ವಿರುದ್ದ ಧಿಕ್ಕಾರವನ್ನೂ ಕೂಗಿ, 'ಬೇಕೇ, ಬೇಕು ನ್ಯಾಯಬೇಕು' ಎಂದು ಘೋಷಣೆ ಕೂಗಿದರು.