For the best experience, open
https://m.samyuktakarnataka.in
on your mobile browser.

ಕಿಚ್ಚನ ಹೃದಯ ತಟ್ಟಿದ ಪ್ರಧಾನಿ ಸಾಂತ್ವನ

05:19 PM Oct 28, 2024 IST | Samyukta Karnataka
ಕಿಚ್ಚನ ಹೃದಯ ತಟ್ಟಿದ ಪ್ರಧಾನಿ ಸಾಂತ್ವನ

ಬೆಂಗಳೂರು: ನಟ ಕಿಚ್ಚ ಸುದೀಪ್​ ಅವರ ತಾಯಿ ನಿಧನದ ನಂತರ ಸಂತಾಪದ ಸಾಗರವೇ ಹರಿದುಬಂದಿತ್ತು.
ಈ ಕುರಿತಂತೆ ನಟ ಸುದೀಪ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂತಾಪಸೂಚಕ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, "ನಿಮ್ಮ ಸಹಾನುಭೂತಿಯ ಸಂತಾಪದ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವನದ ಮೂಲಸೆಲೆಯನ್ನು ನೀಡಿವೆ. ನಿಮ್ಮ ಸಾಂತ್ವನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಆಭಾರಿ" ಎಂದಿದ್ದಾರೆ.
ನಟ ಸುದೀಪ್​ ಅವರಿಗೆ ಅಕ್ಟೋಬರ್ 23ರಂದು ಪ್ರಧಾನಿ ಕಚೇರಿಯಿಂದ ಸಂತಾಪಸೂಚಕ ಪತ್ರವನ್ನು ಕಳುಹಿಸಲಾಗಿದೆ.

Tags :