ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಿಸೆಯಲ್ಲಿ ಪಟಾಕಿ ಸಿಡಿದು ಬಾಲಕನಿಗೆ ತೀವ್ರ ಗಾಯ

08:32 PM Sep 12, 2024 IST | Samyukta Karnataka

ಬೆಳಗಾವಿ: ಚಡ್ಡಿ ಕಿಸೆಯಲ್ಲಿ ಹಾಕಿದ್ದ ಪಟಾಕಿ ಸಿಡಿದ ಪರಿಣಾಮವಾಗಿ ಬಾಲಕನ ಮರ್ಮಾಂಗಕ್ಕೆ ತೀವ್ರ ಗಾಯಗೊಂಡಿರುವ ಘಟನೆ ಇಲ್ಲಿನ ರಾಮನಗರದಲ್ಲಿ ನಡೆದಿದೆ.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಈ ವೇಳೆ ರಾಮನಗರದ ಹನುಮಂತ ಗಾಡಿವಡ್ಡರ(೧೨) ಬಾಲಕ ಪಟಾಕಿಗೆ ಬೆಂಕಿ ಹಚ್ಚಿದಾಗ ಅದು ಸಿಡಿಯದ ಕಾರಣ ಪಟಾಕಿ ಹತ್ತಿಲ್ಲ ಎಂದು ಭಾವಿಸಿ ಚಡ್ಡಿ ಕಿಸೆಯಲ್ಲಿ ಹಾಕಿಕೊಂಡಿದ್ದ. ಆದರೆ ಕಿಸೆಗೆ ಹಾಕಿದ್ದ ಪಟಾಕಿ ಅಲ್ಲಿಯೇ ಸಿಡಿದ ಕಾರಣ ಬಾಲಕನ ಮರ್ಮಾಂಗಕ್ಕೆ ತೀವ್ರ ಗಾಯವಾಗಿದೆ. ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Article