For the best experience, open
https://m.samyuktakarnataka.in
on your mobile browser.

ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

09:58 PM Nov 30, 2023 IST | Samyukta Karnataka
ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಶಿರಸಿ: ಸ್ನೇಹಿತರೊಡನೆ ಕೆರೆಯಲ್ಲಿ ನೀರಿನ ಆಟ ಆಡಲು ಹೋದ ವಿದ್ಯಾರ್ಥಿಯೊಬ್ಬ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಬನವಾಸಿಯ ಹಾಡ್ಲಿಗಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಮಧುರವಳ್ಳಿಯ ರಾಮಕುಮಾರ್ ಮಧುಕೇಶ್ವರ ನಾಯ್ಕ್, ಮೃತಪಟ್ಟ ವಿದ್ಯಾರ್ಥಿ, ಈತನು ಬನವಾಸಿಯ ನಾಗಶ್ರೀ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
ಸಾಯಂಕಾಲ ೪ ಗಂಟೆಗೆ ನಾಗಶ್ರೀ ಪ್ರೌಢಶಾಲೆಯ ನಾಲ್ಕು ವಿದ್ಯಾರ್ಥಿಗಳ ಸ್ನೇಹಿತರ ತಂಡ ಹಾಡ್ಲಿಗಿ ಗ್ರಾಮದ ಕನಕಾಪುರ ಕೆರೆಗೆ ನೀರಿನ ಆಟ ಆಡಲು ಕೆರೆಗೆ ಇಳಿದಿದ್ದು, ಆಕಸ್ಮಿಕವಾಗಿ ರಾಮಕುಮಾರ್ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಬನವಾಸಿ ಪಿಎಸ್‌ಐ ಚಂದ್ರಕಲಾ ಪತ್ತಾರ್ ನೇತೃತ್ವದ ಪೊಲೀಸರ ತಂಡ, ಸ್ಥಳೀಯ ಗ್ರಾಮಸ್ಥರು, ಫೈರ್ ಬ್ರಿಗೇಡ್ ತಂಡ ಹಾಗೂ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ಟೀಮ್, ಶಿರಸಿ ಗೋಪಾಲ್ ಗೌಡ ನೇತೃತ್ವದ ತಂಡ ಸತತ ಕಾರ್ಯಾಚರಣೆ ನಡೆಸಿ ರಾತ್ರಿ ೮ ಗಂಟೆಗೆ ಕೆರೆಯಲ್ಲಿ ಮೃತ ವಿದ್ಯಾರ್ಥಿಯ ದೇಹವನ್ನು ಪತ್ತೆ ಹಚ್ಚಿ ನೀರಿನಿಂದ ಮೇಲೆ ಎತ್ತಿ ತಂದಿದ್ದಾರೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.