For the best experience, open
https://m.samyuktakarnataka.in
on your mobile browser.

ಕೈಗಾರಿಕಾ ಶಕ್ತಿ ಕೇಂದ್ರವಾಗಿ ಬದಲಾಗುತ್ತಿದೆ ಕರ್ನಾಟಕ!

03:36 PM Sep 14, 2024 IST | Samyukta Karnataka
ಕೈಗಾರಿಕಾ ಶಕ್ತಿ ಕೇಂದ್ರವಾಗಿ ಬದಲಾಗುತ್ತಿದೆ ಕರ್ನಾಟಕ

ಬೆಂಗಳೂರು: ಜಪಾನ್ ಭೇಟಿಯ ಯಶಸ್ಸಿನ ಫಲವಾಗಿ #Nidec ಕಾರ್ಪೊರೇಷನ್ ಹುಬ್ಬಳಿ ಧಾರವಾಡದಲ್ಲಿ ₹150 ಕೋಟಿ ಹೆಚ್ಚುವರಿ ಹೂಡಿಕೆಗೆ ಮುಂದಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಈಗಾಗಲೇ ಮಾಡಿರುವ ಹೂಡಿಕೆಯೂ ಸೇರಿ ಒಟ್ಟು 600 ಕೋಟಿಗಳಾಗಲಿದ್ದು, 800 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದಾಗಿ, EV ವಾಹನಗಳ ಉತ್ಪಾದನೆಗೆ ಹುಬ್ಬಳಿ-ಧಾರವಾಡದಲ್ಲಿ ಮತ್ತಷ್ಟು ಬಲ ದೊರಕುತ್ತಿದ್ದು, ಡೇಟಾ ಸೆಂಟರ್‌ಗಳು ಮತ್ತು ನವೀಕರಿಸಬಹುದಾದ ಇಂಧನ ಉದ್ಯಮಗಳು ಸಹ ಇಲ್ಲಿ ಸ್ಥಾಪನೆಯಾಗಲಿದೆ. ಕರ್ನಾಟಕವು ಕೈಗಾರಿಕಾ ಶಕ್ತಿ ಕೇಂದ್ರವಾಗಿ ಬದಲಾಗುತ್ತಿದೆ ಎಂದಿದ್ದಾರೆ.

Tags :