For the best experience, open
https://m.samyuktakarnataka.in
on your mobile browser.

ಮೋದಿ ಮತ್ತೊಮ್ಮೆ ಗೆದ್ದರೆ ತಮ್ಮ ದೇವಸ್ಥಾನ ತಾವೇ ಕಟ್ಟಿಕೊಳ್ತಾರೆ

08:34 PM May 25, 2024 IST | Samyukta Karnataka
ಮೋದಿ ಮತ್ತೊಮ್ಮೆ ಗೆದ್ದರೆ ತಮ್ಮ ದೇವಸ್ಥಾನ ತಾವೇ ಕಟ್ಟಿಕೊಳ್ತಾರೆ

ಕುಷ್ಟಗಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗೆದ್ದರೆ ತಮ್ಮ ದೇವಸ್ಥಾನ ತಾವೇ ಕಟ್ಟಿಕೊಳ್ಳುತ್ತಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಪಟ್ಟಣದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರವರ ನಿವಾಸದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇವರೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಳಿಸಿದ್ದಾರೆ ಎಂದು ಮೋದಿ ಮಾತನಾಡುತ್ತಿದ್ದಾರೆ. ೨೦೪೭ ವರೆಗೂ ಮೋದಿ ಅವರೇ ಪ್ರಧಾನಿಯಾಗುತ್ತಾರೆ ಎಂದುಕೊಂಡಿದ್ದಾರೆ. ಮತದಾರರು ಅವರನ್ನು ಗೆಲ್ಲಿಸಿ ಕಳಿಸಿ ಕೊಟ್ಟಿಲ್ಲ ಬದಲಿಗೆ ದೇವರೇ ಮೋದಿಯನ್ನು ಗೆಲ್ಲಿಸಿ ಬಿಟ್ಟಿದ್ದಾನೆ ಮೋದಿ ಅವರು ಭ್ರಮೆಯಲ್ಲಿ ಇದ್ದಾರೆ ಎಂದರು. ಮೋದಿ ಇನ್ನೊಮ್ಮೆ ಗೆದ್ದರೆ ಸಾಕು ತಮ್ಮದೇ ಆದ ದೇವಸ್ಥಾನವನ್ನು ಕಟ್ಟಿಕೊಳ್ಳುತ್ತಾರೆ. ದೇವರು ನನಗೆ ಕಳಿಸಿದ್ದಾನೆ ಅಂತ ಹೇಳುತ್ತಾರೆ ಇನ್ನೊಮ್ಮೆ ಅವಕಾಶ ಕೊಟ್ಟರೆ ಪ್ರತಿ ಊರಲ್ಲಿ ಮೋದಿ ದೇಗುಲ ಮೋದಿ ಸಬ್ ಕಾ ಸಾಥ್ ಎನ್ನುತ್ತಾರೆ. ಬಿಜೆಪಿಯವರು ಜನರನ್ನು ಖರೀದಿ ತೆಗೆದುಕೊಂಡಿದ್ದಾರೆ ಎನ್ನುವ ರೀತಿ ಮಾತನಾಡುತ್ತಾರೆ ಆದರೆ ಕಾಂಗ್ರೆಸ್ ನವರಾದ ನಾವುಗಳು ಸತ್ಯವನ್ನು ಮಾತನಾಡಲು ಪ್ರಯತ್ನ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಮತದಾರರನ್ನು ದೇವರನ್ನಾಗಿ ಕಾಣುತ್ತದೆ ಎಂದರು.ಈ ವೇಳೆಯಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ, ಮಾಜಿ ಸಂಸದ ಸಂಗಣ್ಣ ಕರಡಿ ಇದ್ದರು.