For the best experience, open
https://m.samyuktakarnataka.in
on your mobile browser.

ಸಿನಿಮಾ ಮಂದಿ ಕರಿಯಾಕ್ ಬಂದ್ರು ಎಂದ ಶಿವಮ್ಮ

05:09 PM Jun 12, 2024 IST | Samyukta Karnataka
ಸಿನಿಮಾ ಮಂದಿ ಕರಿಯಾಕ್ ಬಂದ್ರು ಎಂದ ಶಿವಮ್ಮ

ಬೆಂಗಳೂರು: ಗ್ರಾಮೀಣ ಸೊಗಡಿನ ಶಿವಮ್ಮ ಚಿತ್ರ ರಿಷಭ್ ಶೆಟ್ಟಿ ಫಿಲಂಸ್ ಮೂಲಕ ತರೆಗೆ ಬರಲು ಸಿದ್ದವಾಗಿದೆ,
ನಟನೆ ಗೊತ್ತಿಲ್ಲದ ಗ್ರಾಮದ ಜನರ ಮನವೊಲಿಸಿ ಊರಿನ ಹೆಚ್ಚಿನ ಜನರು ಈ ಚಿತ್ರದಲ್ಲಿ ಅಭಿನಯಿಸುವಂತೆ ಮಾಡಿ ಆನಂತರ ಚಿತ್ರೀಕರಣ ಪೂರ್ಣವಾಗಿ "ಶಿವಮ್ಮ" ಚಿತ್ರ ತೆರೆಗೆ ಬರಲು ಸಿದ್ದವಾಯಿತು. ಬಿಡುಗಡೆಗೂ ಮುನ್ನ ಒಂದು ವರ್ಷದಿಂದ ಸಾಕಷ್ಟು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನವಾಗಿದ್ದು. ವಿಶ್ವದ ಹದಿನೇಳಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು. ಹಲವು ಪ್ರಶಸ್ತಿಗಳು ಗೆದ್ದುಕೊಂಡ ಚಿತ್ರದ ತಾರಾಗಣದ ಆಯ್ಕೆ ನಟನೆಗೆ ನಡೆದ ಕಸರತ್ತು ನಂತರದ ಕರಾಮತ್ತು ಎಲ್ಲವನ್ನು ಶರಣಮ್ಮ ಚಟ್ಟಿ ಅವರು ಎಳೆ ಎಳೆಯಾಗಿ ಹಾಡಿನ ಮೂಲಕ ಹೇಳಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ಚಿತ್ರದ ನಿರ್ದೇಶಕ ಜಯಶಂಕರ ಹಾಗೂ ಜಯಲಕ್ಷ್ಮೀ ಪಾಟೀಲ ರಚಿಸಿದ್ದ, ಹಾಡಿಗೆ ಸಂಗೀತಾ ಕಟ್ಟಿ ದ್ವನಿ ನೀಡಿದ್ದಾರೆ, ಉತ್ತರ ಕರ್ನಾಟಕದ ಶೈಲಿಯ ಈ ಹಾಡಿಗೆ ನಚಿಕೇತ ಶರ್ಮಾ ಸಂಗೀತ ನೀಡಿದ್ದಾರೆ. ಸೊಗಸಾಗಿ ಮೂಡಿಬಂದಿರುವ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಈ ಹಾಡು ಚಲನಚಿತ್ರದಲ್ಲಿ ಇರುವದಿಲ್ಲಾ. ಚಿತ್ರ ೧೪ ರಂದು ಬಿಡುಗಡೆಯಾಗುತ್ತಿದ್ದು ಅದಕ್ಕೂ ಮುನ್ನ ಈ ಪ್ರೊಮೊ ಸಾಂಗ್ ನೀವೊಮ್ಮೆ ಕೇಳಿ…