For the best experience, open
https://m.samyuktakarnataka.in
on your mobile browser.

ಕೊರೊನಾ ವೇಳೆ ಭ್ರಷ್ಟಾಚಾರ ನಡೆದಿಲ್ಲ ಎಂದು ದೀಪ ಹಚ್ಚಲಿ

01:07 PM Jul 08, 2023 IST | Samyukta Karnataka
ಕೊರೊನಾ ವೇಳೆ ಭ್ರಷ್ಟಾಚಾರ ನಡೆದಿಲ್ಲ ಎಂದು ದೀಪ ಹಚ್ಚಲಿ

ಚಿಕ್ಕಬಳ್ಳಾಪುರ: ಕರೋನಾ ವೇಳೆ ಭ್ರಷ್ಟಾಚಾರ ನಡೆದಿಲ್ಲ ಎಂದು ದೀಪ ಹಚ್ಚಲಿ ಎಂದು ಮಾಜಿ ಸಚಿವ ಡಾ. ಕೆ ಸುಧಾಕರ್‌ ವಿರುದ್ದ ಶಾಸಕ ಪ್ರದೀಪ್‌ ಈಶ್ವರ್‌ ಸವಾಲು ಹಾಕಿದ್ದಾರೆ. ಮಾಜಿ ಸಚಿವ ಡಾ ಕೆ ಸುಧಾಕರ್ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿಲ್ಲ. ಶಾಸಕ ಪ್ರದೀಪ್ ಈಶ್ವರ್ ಭೋಗನಂದೀಶ್ವರ ದೇವಸ್ಥಾನದಲ್ಲಿ ಬಂದು ದೀಪ ಹಚ್ಚಲಿ ಎಂದಿದ್ದರು. ನನ್ನ ಮೇಲೆ ಮಾಡಿರುವ ಆರೋಪ ಸಾಬೀತುಪಡಿಸಿ ದೀಪ ಹಚ್ಚಲಿ ಎಂದಿದ್ದರು. ಈ ಹೇಳಿಕೆಗೆ ಪ್ರದೀಪ್ ಈಶ್ವರ್ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಡಾ ಕೆ ಸುಧಾಕರ್ ಕೊರೊನಾ ಸಮಯದಲ್ಲಿ ಅವ್ಯವಹಾರ ನಡೆದಿಲ್ಲ ಎಂದು ದೀಪ ಹಚ್ಚಲಿ. ಸಾವಿರಾರು ಕೋಟಿ ಅವ್ಯವಹಾರ ನಡೆಸಿದ್ದಾರೆ. ಎಲ್ಲಾ ದಾಖಲೆ ಸಮೇತ ಬಂದು ನಂದಿ ದೇವಸ್ಥಾನದ ಮುಂದೆ ಬಿಡುಗಡೆ ಮಾಡ್ತೇನೆ ಎಂದರು. ಸಾಧ್ಯವಾದರೆ ಎಸ್‌ಐಟಿ ತನಿಖೆಗೆ ನಮ್ಮ ಸರ್ಕಾರ ಚಿಂತನೆ ನಡೆಸಿದೆ. ನಾನು ದೀಪ ಹಚ್ಚುತ್ತೇನೆ, ಅವರು ಸಹ ಕೊರೊನಾ ವೇಳೆ ಭ್ರಷ್ಟಾಚಾರ ನಡೆದಿಲ್ಲ ಎಂದು ದೀಪ ಹಚ್ಚಲಿ. ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡು ಹಾಕ್ಕೊಂಡು ದೀಪ ಹಚ್ಚೋಣ ಎಂದು ಕುಟುಕಿದರು.