For the best experience, open
https://m.samyuktakarnataka.in
on your mobile browser.

ಗುಡಿಸಲಿಗೆ ಬೆಂಕಿ: ಅಪಾರ ಹಾನಿ

04:53 PM Apr 22, 2024 IST | Samyukta Karnataka
ಗುಡಿಸಲಿಗೆ ಬೆಂಕಿ  ಅಪಾರ ಹಾನಿ

ಕುಷ್ಟಗಿ: ಆಕಸ್ಮಿಕವಾಗಿ ಬೆಂಕಿ ತಗಲಿ ಗುಡಿಸಲು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಐದು ಕುರಿ ಮರಿಗಳು ಸಾವನ್ನಪ್ಪಿರುವ ಘಟನೆ ಕಿಲ್ಲಾರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಂಕ್ರಮ್ಮ ದುರ್ಗಪ್ಪ ಕ್ಯಾರಿಹಾಳ ಇವರ ಗುಡಿಸಲು ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಮನೆಯಲ್ಲಿದ್ದ ನಗದು, ಚಿನ್ನ-ಬೆಳ್ಳಿ, ಗೃಹಪಯೋಗಿ ವಸ್ತುಗಳು ಸೇರಿದಂತೆ ೫ ಕುರಿಮರಿಗಳು ಸಾವನ್ನಪ್ಪಿವೆ ಎಂದು ಹೇಳಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.