For the best experience, open
https://m.samyuktakarnataka.in
on your mobile browser.

ಗುಮ್ಮಗೋಳ: ತಲಾಟಿ ಆತ್ಮಹತ್ಯೆ

09:43 PM Dec 27, 2023 IST | Samyukta Karnataka
ಗುಮ್ಮಗೋಳ  ತಲಾಟಿ ಆತ್ಮಹತ್ಯೆ

ನವಲಗುಂದ: ವೈಯಕ್ತಿಕ ಕಾರಣಗಳಿಂದ ಬೇಸತ್ತು ತಲಾಟಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನವಲಗುಂದ ಪಟ್ಟಣದ ಹುಲ್ಲು ಮಾರುವ ಪೇಟೆಯ ಮನೆಯಲ್ಲಿ ಸಂಭವಿಸಿದೆ.
ಮಹೇಶ ಮಂತ್ರಿ ಎಂಬಾತನೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಮಹೇಶ ಹಲವು ವರ್ಷಗಳಿಂದ ನವಲಗುಂದ ಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕೆಲವು ತಿಂಗಳ ಹಿಂದಷ್ಟೇ ಗುಮ್ಮಗೋಳಗೆ ವರ್ಗಾವಣೆಯಾಗಿದ್ದರು.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಖರ ಮಾಹಿತಿ ತಿಳಿದಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.